ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕೆ ಸೈಕಲ್ ಏರಿದ ಖೇಣಿ

Last Updated 4 ಮೇ 2018, 14:40 IST
ಅಕ್ಷರ ಗಾತ್ರ

ಜನವಾಡ: ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಮತದಾರರನ್ನು ಸೆಳೆಯಲು ದಿನಕ್ಕೊಂದು ಹೊಸ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಖೇಣಿ ಅವರು ಗುರುವಾರವಷ್ಟೇ ಕ್ಷೇತ್ರ ವ್ಯಾಪ್ತಿಯ ಆಣದೂರು ಗ್ರಾಮದ ಸಲೂನ್‌ನಲ್ಲಿ ವ್ಯಕ್ತಿಯೊಬ್ಬರ ಕೂದಲು ಕತ್ತರಿಸುವ ಮೂಲಕ ಮತಯಾಚಿಸಿ ಸುದ್ದಿ ಮಾಡಿದ್ದರು. ಐಷಾರಾಮಿ ಕಾರುಗಳ ಒಡೆಯರಾಗಿರುವ ಅವರು ಶುಕ್ರವಾರ ಘೋಡಂಪಳ್ಳಿ ಗ್ರಾಮದಲ್ಲಿ ಸೈಕಲ್‌ ಏರಿ ಗಮನ ಸೆಳೆದರು.

ಬೆಂಬಲಿಗರ ಸಹಾಯದಿಂದ ಸೈಕಲ್‌ ಹತ್ತಿದ ಅವರು ಸ್ವಲ್ಪ ದೂರದವರೆಗೆ ಚಲಾಯಿಸಿದರು. ಇದೇ ಗ್ರಾಮದ ಹೋಟೆಲ್‌ನಲ್ಲಿ ಚಹಾ ಪಾತ್ರೆಯಲ್ಲಿ ಸೌಟು ತಿರುವಿ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದರು.

ಶಾಸಕ ಖೇಣಿ ಚಹಾ ಪಾತ್ರೆಯಲ್ಲಿ ಸೌಟು ತಿರುವಿ ಮತದಾರರ ಗಮನ ಸೆಳೆಯಲು ಯತ್ನಿಸಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT