<p><strong>ಬೀರೂರು: </strong>‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಮಾಡಿದ ಸಾಧನೆ ಏನು? ನನ್ನ ಮುಂದೆ ಬಂದು ನಿಲ್ಲಿ, ನಿಮ್ಮ ಪರ್ಸೆಂಟೇಜ್ ಸರ್ಕಾರದ ಪ್ರತಿಯೊಂದು ವಿಷಯವನ್ನೂ ಬಿಚ್ಚಿಡುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.</p>.<p>ಇಲ್ಲಿ ಶನಿವಾರ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದ ವಿವಿಧ ಸಮುದಾಯಗಳ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿ, ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಸಿದ್ದರಾಮಯ್ಯ ಮೊದಲು ಎಲ್ಲಿದ್ದರು? ಅವರೊಬ್ಬ ರಾಜಕೀಯ ಶಕ್ತಿ ಎಂದು ತಲೆ ಮೇಲೆ ಹೊತ್ತು ರಾಜ್ಯದಲ್ಲಿ ತಿರುಗಿದೆ. ಈಗ ನನಗೇ ಬುದ್ಧಿ ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ’ ಎಂದರು.</p>.<p>‘ರಾಜ್ಯದ ರೈತರ ಹೊಲಗಳಿಗೆ ನೀರು ಕೊಟ್ಟರೆ, ಸಿ.ಎಂ ತರುವ ಜೋಳಿಗೆ ತುಂಬಿಸಿ ಕಳಿಸುವ ಶಕ್ತಿ ನಮ್ಮ ಜನರಿಗಿದೆ’ ಎಂದರು.</p>.<p>‘ಜೆಡಿಎಸ್ಗೆ ಹಾಕಿದ ಮತ ಬಿಜೆಪಿಗೆ ಹಾಕಿದಂತೆ ಎಂದು ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸುವ ಹೇಳಿಕೆಯನ್ನು ನಮ್ಮ ಮಹಾನ್ ಮುಖ್ಯಮಂತ್ರಿ ನೀಡಿದ್ದಾರೆ. ಈದ್ಗಾ ಸಮಸ್ಯೆ ಬಗೆಹರಿಸಿ, ಮಹಿಳೆಯರಿಗೆ, ಮುಸ್ಲಿಮರಿಗೆ ರಾಜಕೀಯ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಕಲ್ಪಿಸಿದೆ. 15 ವರ್ಷ ದೇಶವನ್ನು ಆಳಿದ ಇಂದಿರಾ ಗಾಂಧಿ ಆ ಕೆಲಸ ಮಾಡಿರಲಿಲ್ಲ’ ಎಂದು ಹೇಳಿದರು.</p>.<p>‘ದೇವೇಗೌಡನನ್ನು ಗೌರವಿಸಿ ಎಂದು ಮೋದಿ ಹೇಳಿಕೆ ಕೊಟ್ಟ ಕೂಡಲೇ, ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಎಂದು ಹೇಳುತ್ತಾರೆ ಎಂದು ನಾನು ಹೇಳಿದ್ದೆ. ಸೌಜನ್ಯವಿಲ್ಲದ ಕೀಳು ನಡೆ-ನುಡಿಗಳು ಮುಖ್ಯಮಂತ್ರಿಗೆ ಗೌರವ ತರುವುದಿಲ್ಲ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು: </strong>‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಮಾಡಿದ ಸಾಧನೆ ಏನು? ನನ್ನ ಮುಂದೆ ಬಂದು ನಿಲ್ಲಿ, ನಿಮ್ಮ ಪರ್ಸೆಂಟೇಜ್ ಸರ್ಕಾರದ ಪ್ರತಿಯೊಂದು ವಿಷಯವನ್ನೂ ಬಿಚ್ಚಿಡುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.</p>.<p>ಇಲ್ಲಿ ಶನಿವಾರ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದ ವಿವಿಧ ಸಮುದಾಯಗಳ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿ, ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಸಿದ್ದರಾಮಯ್ಯ ಮೊದಲು ಎಲ್ಲಿದ್ದರು? ಅವರೊಬ್ಬ ರಾಜಕೀಯ ಶಕ್ತಿ ಎಂದು ತಲೆ ಮೇಲೆ ಹೊತ್ತು ರಾಜ್ಯದಲ್ಲಿ ತಿರುಗಿದೆ. ಈಗ ನನಗೇ ಬುದ್ಧಿ ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ’ ಎಂದರು.</p>.<p>‘ರಾಜ್ಯದ ರೈತರ ಹೊಲಗಳಿಗೆ ನೀರು ಕೊಟ್ಟರೆ, ಸಿ.ಎಂ ತರುವ ಜೋಳಿಗೆ ತುಂಬಿಸಿ ಕಳಿಸುವ ಶಕ್ತಿ ನಮ್ಮ ಜನರಿಗಿದೆ’ ಎಂದರು.</p>.<p>‘ಜೆಡಿಎಸ್ಗೆ ಹಾಕಿದ ಮತ ಬಿಜೆಪಿಗೆ ಹಾಕಿದಂತೆ ಎಂದು ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸುವ ಹೇಳಿಕೆಯನ್ನು ನಮ್ಮ ಮಹಾನ್ ಮುಖ್ಯಮಂತ್ರಿ ನೀಡಿದ್ದಾರೆ. ಈದ್ಗಾ ಸಮಸ್ಯೆ ಬಗೆಹರಿಸಿ, ಮಹಿಳೆಯರಿಗೆ, ಮುಸ್ಲಿಮರಿಗೆ ರಾಜಕೀಯ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಕಲ್ಪಿಸಿದೆ. 15 ವರ್ಷ ದೇಶವನ್ನು ಆಳಿದ ಇಂದಿರಾ ಗಾಂಧಿ ಆ ಕೆಲಸ ಮಾಡಿರಲಿಲ್ಲ’ ಎಂದು ಹೇಳಿದರು.</p>.<p>‘ದೇವೇಗೌಡನನ್ನು ಗೌರವಿಸಿ ಎಂದು ಮೋದಿ ಹೇಳಿಕೆ ಕೊಟ್ಟ ಕೂಡಲೇ, ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಎಂದು ಹೇಳುತ್ತಾರೆ ಎಂದು ನಾನು ಹೇಳಿದ್ದೆ. ಸೌಜನ್ಯವಿಲ್ಲದ ಕೀಳು ನಡೆ-ನುಡಿಗಳು ಮುಖ್ಯಮಂತ್ರಿಗೆ ಗೌರವ ತರುವುದಿಲ್ಲ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>