‘ನೀವ್ ಹೇಳಿದ್ದು ಎಲ್ಲಾ ಖರೆ ಐತ್ರೀ. ಆದರೆ ಏನ್ಮಾಡೋದ್ರೀ. ಆರಂಭದ ದಿನಗಳಲ್ಲಿ ಬಿಜೆಪಿ ಕಟ್ಟೋವಾಗ ನನ್ನನ್ನು ಬೈದೋರೇ ಈಗ ನಮ್ಮನ್ ಹೊರ ದಬ್ಯಾರ್ರೀ. ಅದ್ರಲ್ಲೂ ನಮ್ಮ ಜಿಗಜಿಣಗಿಯಣ್ಣ ಏನಾದ್ರೂ ಆತ್ಮೀಯವಾಗಿ, ನಮ್ಮ ಭುಜದ ಮೇಲೆ ಕೈ ಹಾಕಿ ಮಾತಾಡಿದ್ರೂ ಅಂದ್ರೇ; ಏನೋ ಲೆಕ್ಕಾಚಾರ ಹಾಕಿರ್ತಾರ್ರೀ. ಯಾವಾಗ ಯಾವ ರೀತಿ ದಾಳ ಉರುಳಿಸಿ ನಮ್ಮನ್ ಮುಳುಗುಸ್ತಾರೆ ಎಂಬುದೇ ಗೊತ್ತಾಗಲ್ರೀ..!’ ಎಂದು ಕಟಕದೊಂಡ ಹೇಳುತ್ತಿದ್ದಂತೆ ಕಿಕ್ಕಿರಿದ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ಮುಳುಗಿತು.