<p><strong>ವಿಜಯಪುರ: ‘</strong>ಬಿಜೆಪಿಯಲ್ಲಿದ್ದ ಮೂಲ ಲೆಫ್ಟ್ (ಎಡಗೈ) ನಾನೇ. ಆದ್ರೇ ಹೊರಗಿಂದ (ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ) ಬಂದವ್ರು ನನ್ನನ್ನೇ ಲೆಫ್ಟ್ (ಹೊರ ಹಾಕಿದರು) ಮಾಡ್ಬಿಟ್ಟ್ರು...’</p>.<p>ನಾಗಠಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಠ್ಠಲ ಕಟಕದೊಂಡ ವಿಜಯಪುರದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಹಾಸ್ಯಭರಿತ ದಾಟಿಯಲ್ಲಿ ಉತ್ತರಿಸಿದ ಪರಿಯಿದು.</p>.<p>‘ಅಲ್ರೀ... ಬಿಜೆಪಿ ಜಿಲ್ಲಾ ಘಟಕದ ಬಾಸ್ ನೀವೇ ಆಗಿದ್ರಿ. ನಿಮ್ಮ ಅಣತಿಯಂತೆ ಎಲ್ಲವೂ ನಡೆಯುತ್ತಿತ್ತು.</p>.<p>ಯಡಿಯೂರಪ್ಪ ಅವರ ಒಡನಾಡಿ ಆಗಿದ್ರಿ. ಕೇಂದ್ರ ಸಚಿವ ಜಿಗಜಿಣಗಿ ನಿಮ್ಮನ್ನು ‘ನನ್ನ ಸಣ್ತಮ್ಮನಿದ್ದಂತೆ’ ಅನ್ತಿದ್ದರು. ನಿಮಗೇ ಹಿಂಗಾದ್ರೆ ಹೆಂಗ್ರೀ’ ಎಂದು ಪತ್ರಕರ್ತ ಸಮೂಹ ಕಟಕದೊಂಡ ಅವರ ಕಾಲೆಳೆಯಿತು.</p>.<p>‘ನೀವ್ ಹೇಳಿದ್ದು ಎಲ್ಲಾ ಖರೆ ಐತ್ರೀ. ಆದರೆ ಏನ್ಮಾಡೋದ್ರೀ. ಆರಂಭದ ದಿನಗಳಲ್ಲಿ ಬಿಜೆಪಿ ಕಟ್ಟೋವಾಗ ನನ್ನನ್ನು ಬೈದೋರೇ ಈಗ ನಮ್ಮನ್ ಹೊರ ದಬ್ಯಾರ್ರೀ. ಅದ್ರಲ್ಲೂ ನಮ್ಮ ಜಿಗಜಿಣಗಿಯಣ್ಣ ಏನಾದ್ರೂ ಆತ್ಮೀಯವಾಗಿ, ನಮ್ಮ ಭುಜದ ಮೇಲೆ ಕೈ ಹಾಕಿ ಮಾತಾಡಿದ್ರೂ ಅಂದ್ರೇ; ಏನೋ ಲೆಕ್ಕಾಚಾರ ಹಾಕಿರ್ತಾರ್ರೀ. ಯಾವಾಗ ಯಾವ ರೀತಿ ದಾಳ ಉರುಳಿಸಿ ನಮ್ಮನ್ ಮುಳುಗುಸ್ತಾರೆ ಎಂಬುದೇ ಗೊತ್ತಾಗಲ್ರೀ..!’ ಎಂದು ಕಟಕದೊಂಡ ಹೇಳುತ್ತಿದ್ದಂತೆ ಕಿಕ್ಕಿರಿದ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ಮುಳುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: ‘</strong>ಬಿಜೆಪಿಯಲ್ಲಿದ್ದ ಮೂಲ ಲೆಫ್ಟ್ (ಎಡಗೈ) ನಾನೇ. ಆದ್ರೇ ಹೊರಗಿಂದ (ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ) ಬಂದವ್ರು ನನ್ನನ್ನೇ ಲೆಫ್ಟ್ (ಹೊರ ಹಾಕಿದರು) ಮಾಡ್ಬಿಟ್ಟ್ರು...’</p>.<p>ನಾಗಠಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಠ್ಠಲ ಕಟಕದೊಂಡ ವಿಜಯಪುರದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಹಾಸ್ಯಭರಿತ ದಾಟಿಯಲ್ಲಿ ಉತ್ತರಿಸಿದ ಪರಿಯಿದು.</p>.<p>‘ಅಲ್ರೀ... ಬಿಜೆಪಿ ಜಿಲ್ಲಾ ಘಟಕದ ಬಾಸ್ ನೀವೇ ಆಗಿದ್ರಿ. ನಿಮ್ಮ ಅಣತಿಯಂತೆ ಎಲ್ಲವೂ ನಡೆಯುತ್ತಿತ್ತು.</p>.<p>ಯಡಿಯೂರಪ್ಪ ಅವರ ಒಡನಾಡಿ ಆಗಿದ್ರಿ. ಕೇಂದ್ರ ಸಚಿವ ಜಿಗಜಿಣಗಿ ನಿಮ್ಮನ್ನು ‘ನನ್ನ ಸಣ್ತಮ್ಮನಿದ್ದಂತೆ’ ಅನ್ತಿದ್ದರು. ನಿಮಗೇ ಹಿಂಗಾದ್ರೆ ಹೆಂಗ್ರೀ’ ಎಂದು ಪತ್ರಕರ್ತ ಸಮೂಹ ಕಟಕದೊಂಡ ಅವರ ಕಾಲೆಳೆಯಿತು.</p>.<p>‘ನೀವ್ ಹೇಳಿದ್ದು ಎಲ್ಲಾ ಖರೆ ಐತ್ರೀ. ಆದರೆ ಏನ್ಮಾಡೋದ್ರೀ. ಆರಂಭದ ದಿನಗಳಲ್ಲಿ ಬಿಜೆಪಿ ಕಟ್ಟೋವಾಗ ನನ್ನನ್ನು ಬೈದೋರೇ ಈಗ ನಮ್ಮನ್ ಹೊರ ದಬ್ಯಾರ್ರೀ. ಅದ್ರಲ್ಲೂ ನಮ್ಮ ಜಿಗಜಿಣಗಿಯಣ್ಣ ಏನಾದ್ರೂ ಆತ್ಮೀಯವಾಗಿ, ನಮ್ಮ ಭುಜದ ಮೇಲೆ ಕೈ ಹಾಕಿ ಮಾತಾಡಿದ್ರೂ ಅಂದ್ರೇ; ಏನೋ ಲೆಕ್ಕಾಚಾರ ಹಾಕಿರ್ತಾರ್ರೀ. ಯಾವಾಗ ಯಾವ ರೀತಿ ದಾಳ ಉರುಳಿಸಿ ನಮ್ಮನ್ ಮುಳುಗುಸ್ತಾರೆ ಎಂಬುದೇ ಗೊತ್ತಾಗಲ್ರೀ..!’ ಎಂದು ಕಟಕದೊಂಡ ಹೇಳುತ್ತಿದ್ದಂತೆ ಕಿಕ್ಕಿರಿದ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ಮುಳುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>