<p><strong>ಮಂಡ್ಯ: </strong>ಶಾಸಕ ಅಂಬರೀಷ್, ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾ ಕಣದಿಂದ ಹಿಂದೆ ಸರಿಯುತ್ತಿದ್ದಂತೆ ಗಣಿಗ ಪಿ. ರವಿಕುಮಾರ್ಗೌಡ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.</p>.<p>‘ಅಂಬರೀಷ್ ಬಿಟ್ಟರೆ ಸಾಕು’ ಎಂದು ಟಿಕೆಟ್ಗಾಗಿ ಕಾದು ಕುಳಿತಿದ್ದ ಕ್ಷೇತ್ರದ ಕೆಲವು ‘ಹಿರಿಯ ಮುಖಂಡರು’ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷಕ್ಕೆ ದುಡಿದ ಹಿರಿಯರನ್ನು ಹಿಂದಿಕ್ಕಿ, 36 ವರ್ಷದ ಯುವಕನೊಬ್ಬ ಟಿಕೆಟ್ ಪಡೆದದ್ದು ಅವರಿಗೆ ನುಂಗಲಾಗದ ತುತ್ತಾಗಿದೆ.</p>.<p>ಪರಿಣಾಮ, ಎಲ್ಲರೂ ಪ್ರಚಾರ ತ್ಯಜಿಸಿ, ಮೌನಕ್ಕೆ ಶರಣಾದರು. ಹಿರಿಯ ಮುಖಂಡರ ಮುನಿಸು ಪಕ್ಷದ ವರಿಷ್ಠರ ಗಮನಕ್ಕೆ ಬಂತು. ಹಿರಿಯರು ಮತ್ತು ಕಿರಿಯರನ್ನು ಕೂರಿಸಿ ಸಂಧಾನ ಮಾಡಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಂಡ್ಯಕ್ಕೆ ಬಂದರು.</p>.<p>ಒಂದು ಗಂಟೆ ಕಾಲ ನಡೆದ ಸಂಧಾನ ಸಭೆಯಲ್ಲಿ ಹಿರಿಯರ ಮುನಿಸಿಗೆ ಮುಲಾಮು ಹಚ್ಚುವಲ್ಲಿ ಶಿವಕುಮಾರ್ ಯಶಸ್ವಿಯಾದರು. ಕೊನೆಗೆ ಎಲ್ಲರೂ ರವಿಕುಮಾರ್ಗೌಡ ಪರ ಪ್ರಚಾರ ನಡೆಸಲು ಒಪ್ಪಿಕೊಂಡರು.</p>.<p>ನಂತರ ಮಾತನಾಡಿದ ಶಿವಕುಮಾರ್, ‘ಮಂಡ್ಯದಲ್ಲಿ ಕಬಡ್ಡಿ ಬಹಳ ಪ್ರಸಿದ್ಧಿ ಪಡೆದಿದೆ. ಈ ರಾಜಕೀಯ ಕಬಡ್ಡಿಯಲ್ಲಿ ಕಾಲಿಗೆ ಬೀಳುವುದು, ಕಾಲೆಳೆಯುವುದು ಎಲ್ಲವೂ ಸಮಾನ್ಯ’ ಎಂದರು. ಅವರ ಮಾತಿನ ಮರ್ಮ ಅರಿತ ಕಿರಿಯ ಮುಖಂಡರೆಲ್ಲರೂ ಗೊಳ್ ಎಂದು ನಕ್ಕರು. ಆದರೆ ಹಿರಿಯ ಮುಖಂಡರು ಮುಗುಮ್ಮಾಗಿದ್ದರು. ಇದನ್ನು ಕಂಡು ಮಾತನ್ನು ಮುಂದುವರಿಸಿದ ಶಿವಕುಮಾರ್, ‘ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುವುದು</p>.<p>ಬೇಡ. ಹಾಗೆ ಮಾಡಿದರೆ ನಮಗೇ ನಷ್ಟ. ಬೇರೆ ಪಕ್ಷಗಳ ಮುಖಂಡರ ಕಾಲು ಎಳೆಯೋಣ’ ಎಂದಾಗ ಹಿರಿಯ, ಕಿರಿಯ ಮುಖಂಡರೆಲ್ಲರೂ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಶಾಸಕ ಅಂಬರೀಷ್, ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾ ಕಣದಿಂದ ಹಿಂದೆ ಸರಿಯುತ್ತಿದ್ದಂತೆ ಗಣಿಗ ಪಿ. ರವಿಕುಮಾರ್ಗೌಡ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.</p>.<p>‘ಅಂಬರೀಷ್ ಬಿಟ್ಟರೆ ಸಾಕು’ ಎಂದು ಟಿಕೆಟ್ಗಾಗಿ ಕಾದು ಕುಳಿತಿದ್ದ ಕ್ಷೇತ್ರದ ಕೆಲವು ‘ಹಿರಿಯ ಮುಖಂಡರು’ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷಕ್ಕೆ ದುಡಿದ ಹಿರಿಯರನ್ನು ಹಿಂದಿಕ್ಕಿ, 36 ವರ್ಷದ ಯುವಕನೊಬ್ಬ ಟಿಕೆಟ್ ಪಡೆದದ್ದು ಅವರಿಗೆ ನುಂಗಲಾಗದ ತುತ್ತಾಗಿದೆ.</p>.<p>ಪರಿಣಾಮ, ಎಲ್ಲರೂ ಪ್ರಚಾರ ತ್ಯಜಿಸಿ, ಮೌನಕ್ಕೆ ಶರಣಾದರು. ಹಿರಿಯ ಮುಖಂಡರ ಮುನಿಸು ಪಕ್ಷದ ವರಿಷ್ಠರ ಗಮನಕ್ಕೆ ಬಂತು. ಹಿರಿಯರು ಮತ್ತು ಕಿರಿಯರನ್ನು ಕೂರಿಸಿ ಸಂಧಾನ ಮಾಡಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಂಡ್ಯಕ್ಕೆ ಬಂದರು.</p>.<p>ಒಂದು ಗಂಟೆ ಕಾಲ ನಡೆದ ಸಂಧಾನ ಸಭೆಯಲ್ಲಿ ಹಿರಿಯರ ಮುನಿಸಿಗೆ ಮುಲಾಮು ಹಚ್ಚುವಲ್ಲಿ ಶಿವಕುಮಾರ್ ಯಶಸ್ವಿಯಾದರು. ಕೊನೆಗೆ ಎಲ್ಲರೂ ರವಿಕುಮಾರ್ಗೌಡ ಪರ ಪ್ರಚಾರ ನಡೆಸಲು ಒಪ್ಪಿಕೊಂಡರು.</p>.<p>ನಂತರ ಮಾತನಾಡಿದ ಶಿವಕುಮಾರ್, ‘ಮಂಡ್ಯದಲ್ಲಿ ಕಬಡ್ಡಿ ಬಹಳ ಪ್ರಸಿದ್ಧಿ ಪಡೆದಿದೆ. ಈ ರಾಜಕೀಯ ಕಬಡ್ಡಿಯಲ್ಲಿ ಕಾಲಿಗೆ ಬೀಳುವುದು, ಕಾಲೆಳೆಯುವುದು ಎಲ್ಲವೂ ಸಮಾನ್ಯ’ ಎಂದರು. ಅವರ ಮಾತಿನ ಮರ್ಮ ಅರಿತ ಕಿರಿಯ ಮುಖಂಡರೆಲ್ಲರೂ ಗೊಳ್ ಎಂದು ನಕ್ಕರು. ಆದರೆ ಹಿರಿಯ ಮುಖಂಡರು ಮುಗುಮ್ಮಾಗಿದ್ದರು. ಇದನ್ನು ಕಂಡು ಮಾತನ್ನು ಮುಂದುವರಿಸಿದ ಶಿವಕುಮಾರ್, ‘ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುವುದು</p>.<p>ಬೇಡ. ಹಾಗೆ ಮಾಡಿದರೆ ನಮಗೇ ನಷ್ಟ. ಬೇರೆ ಪಕ್ಷಗಳ ಮುಖಂಡರ ಕಾಲು ಎಳೆಯೋಣ’ ಎಂದಾಗ ಹಿರಿಯ, ಕಿರಿಯ ಮುಖಂಡರೆಲ್ಲರೂ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>