<p><strong>ಬೆಂಗಳೂರು: </strong>ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ 72.36ರಷ್ಟು ಮತದಾನವಾಗಿದೆ.</p>.<p>ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಪ್ಪಳ ಜಿಲ್ಲೆ ಕುಷ್ಠಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ.</p>.<p>ಈ ಬಾರಿ ಹೊಸಕೋಟೆ (ಶೇ 89.97) ಕ್ಷೇತ್ರದಲ್ಲಿ ಅತಿ ಹೆಚ್ಚು, ದಾಸರಹಳ್ಳಿಯಲ್ಲಿ (ಶೇ 48.03) ಅತಿ ಕಡಿಮೆ ಮತದಾನ ಆಗಿದೆ.</p>.<p>1978ರ ಚುನಾವಣೆಯಲ್ಲಿ 71.90ರಷ್ಟು ಮತದಾನ ನಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಆ ನಂತರ 2013ರಲ್ಲಿ ಶೇ 71.45ರಷ್ಟು ಮತದಾನ ಆಗಿತ್ತು.</p>.<p>ಬದಲಾದ ಮತಗಟ್ಟೆ: ‘ಕುಷ್ಠಗಿ ಕ್ಷೇತ್ರದಲ್ಲಿ ಸುಮಾರು 250 ಮತದಾರರು 21ರ ಬದಲಾಗಿ 20ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ. ಇದು ಕಾನೂನಿನ ಪ್ರಕಾರ ಲೋಪವಾಗುತ್ತದೆ. ಹೀಗಾಗಿ, ಮರು ಮತದಾನ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಇಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದರು.</p>.<p>‘ವಿದ್ಯುನ್ಮಾನ ಮತ ಯಂತ್ರದಲ್ಲಿ ದೋಷ ಕಂಡುಬಂದ ಕಾರಣ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮತದಾನ ಮುಂದೂಡಲಾಗಿತ್ತು. ಇಲ್ಲಿ 1,444 ಹಾಗೂ ಕುಷ್ಠಗಿಯ ಎರಡು ಮತಗಟ್ಟೆಗಳಲ್ಲಿ ಒಟ್ಟು 1,683 ಮಂದಿ ಮತ ಚಲಾಯಿಸಬೇಕಿದೆ. ಮರುಮತದಾನದ ಬಗ್ಗೆ ಅವರಿಗೆ ಅರಿವು ಮೂಡಿಸಲಾಗಿದೆ’ ಎಂದು ಹೇಳಿದರು.</p>.<p><strong>ಇನ್ನೂ ಹೆಚ್ಚಲಿದೆ ಪ್ರಮಾಣ: </strong>‘ಶನಿವಾರ ಸಂಜೆ 6 ಗಂಟೆವರೆಗೆ ಶೇ 70.91ರಷ್ಟು ಮತದಾನವಾಗಿತ್ತು. 6 ಗಂಟೆಯೊಳಗೆ ಮತಗಟ್ಟೆಗೆ ಬಂದಿದ್ದ ಎಲ್ಲರಿಗೂ ಟೋಕನ್ ಕೊಟ್ಟು ಮತ ಹಾಕಲು ಅವಕಾಶ ನೀಡಿದ್ದೆವು. ಹೀಗಾಗಿ, ಕೆಲವೆಡೆ ರಾತ್ರಿ 8 ಗಂಟೆವೆರೆಗೂ ಪ್ರಕ್ರಿಯೆ ಮುಂದುವರಿದಿತ್ತು. ಅಂತಿಮವಾಗಿ ಮತದಾನ ಪ್ರಮಾಣ ಶೇ 72.36ಕ್ಕೆ ಏರಿಕೆಯಾಗುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನೂ ಅಳಿಸಿದೆ’ ಎಂದು ಸಂಜೀವ್ಕುಮಾರ್ ಹೇಳಿದರು.</p>.<p>‘ಅಂಚೆ ಮತಗಳು, ಮೂರು ಮತಗಟ್ಟೆಗಳಲ್ಲಿ ಮರುಮತದಾನ ಹಾಗೂ ಎರಡು ಕ್ಷೇತ್ರಗಳ ಮತದಾನ ಬಾಕಿ ಇರುವುದರಿಂದ ರಾಜ್ಯದ ಒಟ್ಟು ಮತದಾನ ಪ್ರಮಾಣದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದರು.<br /> **<br /> <strong>38 ಮತಎಣಿಕೆ ಕೇಂದ್ರಗಳು</strong><br /> ‘ಮೇ 15ರಂದು ನಡೆಯಲಿರುವ ಮತ ಎಣಿಕೆಗೆ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಕಾರ್ಯಕ್ಕೆ 11,160 ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ನಾಲ್ಕು, ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ತಲಾ ಎರಡು ಹಾಗೂ ಉಳಿದ ಜಿಲ್ಲೆಗಳಲ್ಲಿ ಒಂದೊಂದು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಸಂಜೀವ್ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ 72.36ರಷ್ಟು ಮತದಾನವಾಗಿದೆ.</p>.<p>ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಪ್ಪಳ ಜಿಲ್ಲೆ ಕುಷ್ಠಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ.</p>.<p>ಈ ಬಾರಿ ಹೊಸಕೋಟೆ (ಶೇ 89.97) ಕ್ಷೇತ್ರದಲ್ಲಿ ಅತಿ ಹೆಚ್ಚು, ದಾಸರಹಳ್ಳಿಯಲ್ಲಿ (ಶೇ 48.03) ಅತಿ ಕಡಿಮೆ ಮತದಾನ ಆಗಿದೆ.</p>.<p>1978ರ ಚುನಾವಣೆಯಲ್ಲಿ 71.90ರಷ್ಟು ಮತದಾನ ನಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಆ ನಂತರ 2013ರಲ್ಲಿ ಶೇ 71.45ರಷ್ಟು ಮತದಾನ ಆಗಿತ್ತು.</p>.<p>ಬದಲಾದ ಮತಗಟ್ಟೆ: ‘ಕುಷ್ಠಗಿ ಕ್ಷೇತ್ರದಲ್ಲಿ ಸುಮಾರು 250 ಮತದಾರರು 21ರ ಬದಲಾಗಿ 20ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ. ಇದು ಕಾನೂನಿನ ಪ್ರಕಾರ ಲೋಪವಾಗುತ್ತದೆ. ಹೀಗಾಗಿ, ಮರು ಮತದಾನ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಇಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದರು.</p>.<p>‘ವಿದ್ಯುನ್ಮಾನ ಮತ ಯಂತ್ರದಲ್ಲಿ ದೋಷ ಕಂಡುಬಂದ ಕಾರಣ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮತದಾನ ಮುಂದೂಡಲಾಗಿತ್ತು. ಇಲ್ಲಿ 1,444 ಹಾಗೂ ಕುಷ್ಠಗಿಯ ಎರಡು ಮತಗಟ್ಟೆಗಳಲ್ಲಿ ಒಟ್ಟು 1,683 ಮಂದಿ ಮತ ಚಲಾಯಿಸಬೇಕಿದೆ. ಮರುಮತದಾನದ ಬಗ್ಗೆ ಅವರಿಗೆ ಅರಿವು ಮೂಡಿಸಲಾಗಿದೆ’ ಎಂದು ಹೇಳಿದರು.</p>.<p><strong>ಇನ್ನೂ ಹೆಚ್ಚಲಿದೆ ಪ್ರಮಾಣ: </strong>‘ಶನಿವಾರ ಸಂಜೆ 6 ಗಂಟೆವರೆಗೆ ಶೇ 70.91ರಷ್ಟು ಮತದಾನವಾಗಿತ್ತು. 6 ಗಂಟೆಯೊಳಗೆ ಮತಗಟ್ಟೆಗೆ ಬಂದಿದ್ದ ಎಲ್ಲರಿಗೂ ಟೋಕನ್ ಕೊಟ್ಟು ಮತ ಹಾಕಲು ಅವಕಾಶ ನೀಡಿದ್ದೆವು. ಹೀಗಾಗಿ, ಕೆಲವೆಡೆ ರಾತ್ರಿ 8 ಗಂಟೆವೆರೆಗೂ ಪ್ರಕ್ರಿಯೆ ಮುಂದುವರಿದಿತ್ತು. ಅಂತಿಮವಾಗಿ ಮತದಾನ ಪ್ರಮಾಣ ಶೇ 72.36ಕ್ಕೆ ಏರಿಕೆಯಾಗುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನೂ ಅಳಿಸಿದೆ’ ಎಂದು ಸಂಜೀವ್ಕುಮಾರ್ ಹೇಳಿದರು.</p>.<p>‘ಅಂಚೆ ಮತಗಳು, ಮೂರು ಮತಗಟ್ಟೆಗಳಲ್ಲಿ ಮರುಮತದಾನ ಹಾಗೂ ಎರಡು ಕ್ಷೇತ್ರಗಳ ಮತದಾನ ಬಾಕಿ ಇರುವುದರಿಂದ ರಾಜ್ಯದ ಒಟ್ಟು ಮತದಾನ ಪ್ರಮಾಣದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದರು.<br /> **<br /> <strong>38 ಮತಎಣಿಕೆ ಕೇಂದ್ರಗಳು</strong><br /> ‘ಮೇ 15ರಂದು ನಡೆಯಲಿರುವ ಮತ ಎಣಿಕೆಗೆ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಕಾರ್ಯಕ್ಕೆ 11,160 ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ನಾಲ್ಕು, ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ತಲಾ ಎರಡು ಹಾಗೂ ಉಳಿದ ಜಿಲ್ಲೆಗಳಲ್ಲಿ ಒಂದೊಂದು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಸಂಜೀವ್ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>