ಗುರುವಾರ ಬೆಳಿಗ್ಗೆ 9ಕ್ಕೆ ಪ್ರಮಾಣ ವಚನ ನಿಗದಿ ಆಗಿತ್ತು. ಆದರೆ, ಹೊಸ ಮುಖ್ಯಮಂತ್ರಿಯವರನ್ನು ಬರ ಮಾಡಿಕೊಳ್ಳಲು ವಿಧಾನಸೌಧದಲ್ಲಿ ಅಬ್ಬರ, ಸಡಗರ ಕಂಡು ಬರಲಿಲ್ಲ. ಸಾಮಾನ್ಯವಾಗಿ ಹೊಸ ಮುಖ್ಯಮಂತ್ರಿ ಸ್ವಾಗತಿಸುವಾಗ ಕಚೇರಿಯನ್ನು ಭವ್ಯವಾಗಿ ಸಿಂಗರಿಸುವುದು ವಾಡಿಕೆ. ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳುವ ಆದೇಶ ತಡ ರಾತ್ರಿ ಹೊರ ಬಿದ್ದಿತ್ತು. ಆದ್ದರಿಂದ ಸಿಂಗರಿಸಲು ಸಮಯವೇ ಇರಲಿಲ್ಲ ಎಂಬುದು ಸಿಬ್ಬಂದಿ ಸಮಜಾಯಿಷಿ.