ಶೋಷಣೆ ವಿರುದ್ಧ ರೈತರಿಗೆ ಸಹಕಾರ ಶ್ರೀರಕ್ಷೆಯಾಗಲಿ
ಮಂಡ್ಯ, ಜೂನ್ 9– ‘ಸರ್ವ ಸ್ವಾಮ್ಯ ಪ್ರವೃತ್ತಿಯ ಶ್ರೀಮಂತ ಸಮಾಜದ ಹಿಡಿತ ಮತ್ತು ಶೋಷಣೆಯಿಂದ ಬಡ ರೈತರನ್ನು ಸಹಕಾರ ಸಂಸ್ಥೆಗಳು ರಕ್ಷಿಸಬೇಕು. ಸಮಾಜವಾದಿ ಸಮಾಜ ಸ್ಥಾಪನೆಗೆ ಸಹಕಾರ ಚಳವಳಿ ಪ್ರಬಲ ಸಾಧನವಾಗಬೇಕು’ ಎಂದು ಕೇಂದ್ರ ಆಹಾರ, ಕೃಷಿ ಮತ್ತು ಸಹಕಾರ ಸಚಿವ ಶ್ರೀ ಜಗಜೀವನರಾಮ್ ಅವರು ಇಂದು ಇಲ್ಲಿ ಕರೆನೀಡಿದರು.