‘ಭಾರತದ ಯಾವುದೋ ಹಳ್ಳಿಯ ಮಕ್ಕಳು ಸೇರಿ ಒಂದು ಮ್ಯೂಸಿಕ್ ಬ್ಯಾಂಡ್ ರೂಪಿಸಿದ್ದಾರೆ. ಈ ಮಕ್ಕಳ ಬಳಿ ಯಾವುದೇ ಆಧುನಿಕ ವಸ್ತುಗಳು ಇಲ್ಲ. ಬದಲಿಗೆ ಡ್ರಮ್, ಕ್ಯಾನ್ಗಳನ್ನು ಬಳಸಿಕೊಂಡು ಸಂಗೀತ ಪರಿಕರಗಳನ್ನು ನಿರ್ಮಿಸಿಕೊಂಡಿದ್ದಾರೆ. ನಿಜವಾದ ಶಕ್ತಿ ಇರುವುದು ಮನಸ್ಸಿನಲ್ಲಿ’ ಎಂದು ಹಿಂದಿ ಚಿತ್ರನಟ ಅನುಪಮ್ ಖೇರ್ ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಹಲವರು ರಿಟ್ವೀಟ್ ಮಾಡಿದ್ದಾರೆ.'RachanaPurohitasyaPutri/ ಎಂಬ ಹ್ಯಾಂಡಲ್ನಿಂದ ಈ ವಿಡಿಯೊವನ್ನು ಮೊದಲು ಟ್ವೀಟ್ ಮಾಡಲಾಗಿದೆ. ಅದನ್ನೇ ಅನುಪಮ್ ಖೇರ್ ಸಹ ಟ್ವೀಟ್ ಮಾಡಿದ್ದಾರೆ. ಪ್ರತಿಭೆಗೆ ಬಡತನವಿಲ್ಲ. ದೇಶಪ್ರೇಮವನ್ನು ತೋರಿಸಲು ದೊಡ್ಡ ಹುದ್ದೆಯೇ ಬೇಕಿಲ್ಲ. ದೇಶಪ್ರೇಮವಿದ್ದರೆ ಸಾಕು ಎಂದು ಹಲವರು ಟ್ವೀಟ್ ಮಾಡಿದ್ದಾರೆ.