ಮಹಾರಾಷ್ಟ್ರದ ಠಾಣೆಯ ಮೀರಾ ಭಾಯಂದರ್ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಬಸ್ ಒಂದು ಸಿಕ್ಕಿಹಾಕಿಕೊಂಡಿದೆ ಎಂದು ಪ್ರತಿಪಾದಿಸುತ್ತಾ ಚಿತ್ರವೊಂದನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಲಾಗಿದೆ. ‘ಮುಂಬೈನಲ್ಲಿ ಗುಜರಾತ್ ಮಾದರಿಯ ಅಭಿವೃದ್ಧಿ’ ಎಂದು ಅದಕ್ಕೆ ಒಕ್ಕಣೆ ನೀಡಲಾಗಿದೆ. ಕೇರಳದ ಕಾಂಗ್ರೆಸ್ ಘಟಕದ ಖಾತೆಯಲ್ಲೂ ಆ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ ಈ ಮೇಲ್ಸೇತುವೆಯ ವಿನ್ಯಾಸ ತೀವ್ರ ಟೀಕೆಗೆ ಗುರಿಯಾಗಿತ್ತು ಎನ್ನುವುದು ನಿಜ. ಆದರೆ, ಬಸ್ ಅಲ್ಲಿ ಸಿಕ್ಕಿಹಾಕಿಕೊಂಡಿದೆ ಎಂಬುದು ಸುಳ್ಳು ಮಾಹಿತಿ.