ರಾಜಸ್ಥಾನ: ‘ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರ ಕೊಲೆ ಪ್ರಕರಣದಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ವಿಶೇಷ ನ್ಯಾಯಾಲಯವನ್ನು ರಚಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ, ಕನ್ಹಯ್ಯಲಾಲ್ ಕೊಲೆಗಡುಕರಿಗೆ ಈ ಹೊತ್ತಿಗೆ ಗಲ್ಲು ಶಿಕ್ಷೆ ಜಾರಿಯಾಗಿರುತ್ತಿತ್ತು. ಕೊಲೆಗಡುಕರನ್ನು ಹಿಡಿಯಲೂ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಕೇಂದ್ರದಿಂದ ಬಂದ ಎನ್ಐಎ ತಂಡ ಕೊಲೆಗಡುಕರನ್ನು ಬಂಧಿಸಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಅಮಿತ್ ಶಾ ಅವರು ನೀಡುತ್ತಿರುವ ಹಲವು ವಿವರಗಳು ತಪ್ಪಾಗಿವೆ.