‘ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಮುಸ್ಲಿಂ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ’ ಎಂದು ವರೂರಿನ ಗುಣಧರ ನಂದಿ ಮಹಾರಾಜರು ಆರೋಪಿಸಿದ್ದಾರೆ. ಜೊತೆಗೆ, ಜೈನ ಮುನಿಯವರ ಹತ್ಯೆಯು ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಕೋಮುದ್ವೇಷದ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ‘ಹುಸೇನ್ ಎನ್ನುವವರು ಜೈನ ಮುನಿಗಳ ಹತ್ಯೆ ಮಾಡಿದ್ದಾರೆ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ‘ಕರ್ನಾಟಕದ ಕಾಂಗ್ರೆಸ್ ಸರ್ಕಾರವು ‘ಉಚಿತ’ಗಳನ್ನು ಜನರಿಗೆ ನೀಡುತ್ತಿದೆ. ಇದರ ಪರಿಣಾಮವೇ ಇದು’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಆದರೆ, ಇದು ತಿರುಚಲಾದ ಸುದ್ದಿ.