ಇದು ತಿರುಚಿದ ಸುದ್ದಿ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ಜನವರಿ 4ರಂದು ದೆಹಲಿಯ ಮಾಯಾಪುರಿಯಲ್ಲಿ ಈ ಘಟನೆ ನಡೆದಿತ್ತು. ಕಳ್ಳತನದ ಆರೋಪಿಯನ್ನು ಎಎಸ್ಐ ಶಂಭು ದಯಾಳ್ ಅವರು ವಶಕ್ಕೆ ಪಡೆದು, ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು. ಆಗ ಆರೋಪಿಯು ಚಾಕುವಿನಿಂದ ದಯಾಳ್ ಅವರನ್ನು ಹಲವು ಭಾರಿ ಇರಿದಿದ್ದ. ಆರೋಪಿಯ ಹೆಸರು ಅನೀಶ್ ಪ್ರಹ್ಲಾದ್ ರಾಜ್ ಎಂದು ದೆಹಲಿ ಪೊಲೀಸರು ಜನವರಿ ನಾಲ್ಕರಂದು ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದರು. ಆದರೆ, ಆರೋಪಿಯ ಹೆಸರನ್ನು ಬದಲಿಸಿ ಆತ ಮುಸ್ಲಿಂ ಎಂದು ಬಿಂಬಿಸಲಾಗಿದೆ’ ಎಂದು ಫ್ಯಾಕ್ಟ್ಚೆಕ್ನಲ್ಲಿ ವಿವರಿಸಲಾಗಿದೆ.