<p><strong>ಸಿಕರ್:</strong> ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಬೈಕ್ ಮತ್ತು ಟ್ರಕ್ಗೆ ಎಸ್ಯುವಿ ಡಿಕ್ಕಿ ಹೊಡೆದು ಸಂಭವಿಸಿದ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪಲ್ಸಾನಾ-ಖಂಡೇಲ ರಸ್ತೆಯ ಮಜಿ ಸಾಹಬ್ ಕಿ ಧನಿ ಬಳಿ ಭಾನುವಾರ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಎಸ್ಯುವಿ, ಮೊದಲು ಬೈಕ್ಗೆ ಡಿಕ್ಕಿ ಹೊಡೆದಿದೆ.</p>.<p>ಬಳಿಕ ಡ್ರಿಲ್ಲಿಂಗ್ ರಿಗ್ ಯಂತ್ರವನ್ನು ಸಾಗಿಸುತ್ತಿದ್ದ ಟ್ರಕ್ಗೆ ಮುಖಾಮುಖಿಯಾಗಿ ಎಸ್ಯುವಿನಲ್ಲಿದ್ದ ಎಂಟು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.</p>.<p>ಮೃತರನ್ನು ಬೈಕ್ನಲ್ಲಿದ್ದ ಬೀರ್ಬಲ್ (50) ಹಾಗೂ ಅವರ ಪತ್ನಿ ಜಾನಕಿ ದೇವಿ (45) ಎಂದು ಗುರುತಿಸಲಾಗಿದೆ.</p>.<p>ಎಸ್ಯುವಿನಲ್ಲಿದ್ದ ಚೋಮು ಪಟ್ಟಣದ ಸಮೋದ್ ನಿವಾಸಿಗಳಾದ ವಿಜಯ್ (27), ಪೂನಂ (26), ಅನುರಾಧ (25), ಅರವಿಂದ (23), ರೇಖಾ (23), ಅಜಯ್ (20), ಗೊಲು (2.5) ಮತ್ತು ನಿಕೂ (1.5) ಮೃತಪಟ್ಟಿದ್ದಾರೆ.</p>.<p>ರಸ್ತೆ ಅಪಘಾತಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಆದಷ್ಟು ಬೇಗನೇ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಕರ್:</strong> ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಬೈಕ್ ಮತ್ತು ಟ್ರಕ್ಗೆ ಎಸ್ಯುವಿ ಡಿಕ್ಕಿ ಹೊಡೆದು ಸಂಭವಿಸಿದ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪಲ್ಸಾನಾ-ಖಂಡೇಲ ರಸ್ತೆಯ ಮಜಿ ಸಾಹಬ್ ಕಿ ಧನಿ ಬಳಿ ಭಾನುವಾರ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಎಸ್ಯುವಿ, ಮೊದಲು ಬೈಕ್ಗೆ ಡಿಕ್ಕಿ ಹೊಡೆದಿದೆ.</p>.<p>ಬಳಿಕ ಡ್ರಿಲ್ಲಿಂಗ್ ರಿಗ್ ಯಂತ್ರವನ್ನು ಸಾಗಿಸುತ್ತಿದ್ದ ಟ್ರಕ್ಗೆ ಮುಖಾಮುಖಿಯಾಗಿ ಎಸ್ಯುವಿನಲ್ಲಿದ್ದ ಎಂಟು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.</p>.<p>ಮೃತರನ್ನು ಬೈಕ್ನಲ್ಲಿದ್ದ ಬೀರ್ಬಲ್ (50) ಹಾಗೂ ಅವರ ಪತ್ನಿ ಜಾನಕಿ ದೇವಿ (45) ಎಂದು ಗುರುತಿಸಲಾಗಿದೆ.</p>.<p>ಎಸ್ಯುವಿನಲ್ಲಿದ್ದ ಚೋಮು ಪಟ್ಟಣದ ಸಮೋದ್ ನಿವಾಸಿಗಳಾದ ವಿಜಯ್ (27), ಪೂನಂ (26), ಅನುರಾಧ (25), ಅರವಿಂದ (23), ರೇಖಾ (23), ಅಜಯ್ (20), ಗೊಲು (2.5) ಮತ್ತು ನಿಕೂ (1.5) ಮೃತಪಟ್ಟಿದ್ದಾರೆ.</p>.<p>ರಸ್ತೆ ಅಪಘಾತಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಆದಷ್ಟು ಬೇಗನೇ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>