‘ಬಂಧಿತರೆಲ್ಲರೂ ರಾಂಬಾನ್ನ ಗೂಲ್ ತಹಶೀಲ್ ವ್ಯಾಪ್ತಿಯ ತಬ್ಲಿಘಿ ಜಮಾತ್ನ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಅಕ್ರಮ ಪ್ರವೇಶಿಸಿದ ಆರೋಪದ ಮೇಲೆ 12 ಮಂದಿಯನ್ನು ಬಂಧಿಸಿ ಕತುವಾ ಜಿಲ್ಲೆಯ ಹಿರಾನಗರ ಕಾರಾಗೃಹಕ್ಕೆ ಕಳುಹಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.
ಬಂಧಿತ ನಿರಾಶ್ರಿತರೆಲ್ಲರೂ ಜಮ್ಮುವಿನ ಭಟಂಡಿ ಹಾಗೂ ನರ್ವಲ್ ಪ್ರದೇಶದಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದರು.