ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ | ಯಜಮಾನರಾಗಿ ಪಾಲ್ಗೊಳ್ಳುವವರು ಯಾರು?

Published 22 ಜನವರಿ 2024, 0:17 IST
Last Updated 22 ಜನವರಿ 2024, 0:17 IST
ಅಕ್ಷರ ಗಾತ್ರ

ಅಯೋಧ್ಯೆ: ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಳ್ಳಲಿದ್ದಾರೆ. 

‘ದೇಶದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗಗಳಿಗೆ ಸೇರಿದ 14 ದಂಪತಿ ಯಜಮಾನರಾಗಿ ಭಾಗಿಯಾಗಲಿದ್ದಾರೆ’ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

ಉದಯಪುರದ ರಾಮಚಂದ್ರ ಖರಾಡಿ, ಅಸ್ಸಾಂನ ರಾಮ್ ಕುಯಿ ಜೆಮಿ, ಜೈಪುರ ಗುರುಚರಣ್ ಸಿಂಗ್ ಗಿಲ್, ಹರ್ದೋಯಿಯ ಕೃಷ್ಣ ಮೋಹನ್, ಮುಲ್ತಾನಿಯ ರಮೇಶ್ ಜೈನ್, ತಮಿಳುನಾಡಿನ ಆದಲರಸನ್, ಮಹಾರಾಷ್ಟ್ರದ ವಿಠ್ಠಲ ರಾವ್ ಕಾಂಬ್ಳೆ, ಮಹಾರಾಷ್ಟ್ರದ ಲಾತೂರ್‌ನ ಘುಮಂತು ಸಮಾಜ ಟ್ರಸ್ಟ್‌ನ ಮಹಾದೇವ ರಾವ್ ಗಾಯಕವಾಡ್, ಕರ್ನಾಟಕದ ಲಿಂಗರಾಜ ಬಸವರಾಜ, ಲಖನೌನ ದಿಲೀಪ್ ವಾಲ್ಮೀಕಿ, ಡೋಮರಾಜಾ ಕುಟುಂಬದ ಅನಿಲ್ ಚೌಧರಿ, ಕಾಶಿಯ ಕೈಲಾ‌ಶ್ ಯಾದವ್, ಹರಿಯಾಣದ ಪಲವಲ್‌ನ ಅರುಣ್ ಚೌಧರಿ, ಕಾಶಿಯ ಕವೀಂದ್ರ ಪ್ರತಾಪ್ ಸಿಂ‌ಗ್ .

‘ಇದು ಭಾರತದ ಉತ್ಸವ, ಹಿಂದೂ ಸಮಾಜಕ್ಕೆ ಇದು ಒಗ್ಗಟ್ಟಿನ ಹಬ್ಬ’ ಎಂದು ಅಂಬೇಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT