<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, 15 ರಸ್ತೆಗಳ ಸಂಚಾರ ಬಂದ್ ಮಾಡಲಾಗಿದೆ.</p><p>ರಾಜ್ಯದ ಹಲವೆಡೆ ಮುಂದಿನ 4 ದಿನ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ ಎಂದು ಹವಾಮಾನ ಇಲಾೆೆಖ ತಿಳಿಸಿದೆ.</p><p>ಮಂಡಿ ಜಿಲ್ಲೆಯ 12, ಕಿನ್ನೌರ್ನ 2 ಮತ್ತು ಕಾಂಗ್ರಾದ 1 ಪ್ರಮುಖ ರಸ್ತೆ ಬಂದ್ ಆಗಿದೆ. ರಾಜ್ಯದಲ್ಲಿ 62 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ.</p><p>ಭಾರಿ ಬಿರುಗಾಳಿ ಮತ್ತು ಪ್ರವಾಹ ಸ್ಥಿತಿಯಿಂದಾಗಿ ತೋಟಗಳು, ಶಿಥಿಲಾವಸ್ಥೆಯ ಕಟ್ಟಡಗಳು. ಕಚ್ಚಾ ಮನೆಗಳಿಗೆ ಹಾನಿಯಾಗಬಹುದು ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.</p><p>ಬೈಜನಾಥ್ನಲ್ಲಿ ದಾಖಲೆಯ 85 ಮಿ ಮೀ ಮಳೆ ಬಿದ್ದಿದೆ. ಪಲಾಂಪುರ್ (25.2 ಮಿ.ಮೀ) ಜೋಗಿಂದರ್ ನಗರ್ (18 ಮಿ.ಮೀ), ಧರ್ಮಶಾಲಾ (10.4 ಮಿ.ಮೀ), ಹಮೀಪರ್ (8 ಮಿ.ಮೀ), ಪೊಯಾಂಟ ಸಾಹಿಬ್ (7.6 ಮಿ ಮೀ) ಭಾರಿ ಮಳೆ ಸುರಿದಿದೆ.</p><p>ಈ ವರ್ಷದ ಮಳೆ ಸಂಬಂಧಿತ ಅವಘಡಗಳಲ್ಲಿ 49 ಮಂದಿ ಮೃತಪಟ್ಟಿದ್ದು, ₹389 ಕೋಟಿಗೂ ಅಧಿಕ ಆಸ್ತಿ ನಷ್ಟ ಸಂಭವಿಸಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, 15 ರಸ್ತೆಗಳ ಸಂಚಾರ ಬಂದ್ ಮಾಡಲಾಗಿದೆ.</p><p>ರಾಜ್ಯದ ಹಲವೆಡೆ ಮುಂದಿನ 4 ದಿನ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ ಎಂದು ಹವಾಮಾನ ಇಲಾೆೆಖ ತಿಳಿಸಿದೆ.</p><p>ಮಂಡಿ ಜಿಲ್ಲೆಯ 12, ಕಿನ್ನೌರ್ನ 2 ಮತ್ತು ಕಾಂಗ್ರಾದ 1 ಪ್ರಮುಖ ರಸ್ತೆ ಬಂದ್ ಆಗಿದೆ. ರಾಜ್ಯದಲ್ಲಿ 62 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ.</p><p>ಭಾರಿ ಬಿರುಗಾಳಿ ಮತ್ತು ಪ್ರವಾಹ ಸ್ಥಿತಿಯಿಂದಾಗಿ ತೋಟಗಳು, ಶಿಥಿಲಾವಸ್ಥೆಯ ಕಟ್ಟಡಗಳು. ಕಚ್ಚಾ ಮನೆಗಳಿಗೆ ಹಾನಿಯಾಗಬಹುದು ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.</p><p>ಬೈಜನಾಥ್ನಲ್ಲಿ ದಾಖಲೆಯ 85 ಮಿ ಮೀ ಮಳೆ ಬಿದ್ದಿದೆ. ಪಲಾಂಪುರ್ (25.2 ಮಿ.ಮೀ) ಜೋಗಿಂದರ್ ನಗರ್ (18 ಮಿ.ಮೀ), ಧರ್ಮಶಾಲಾ (10.4 ಮಿ.ಮೀ), ಹಮೀಪರ್ (8 ಮಿ.ಮೀ), ಪೊಯಾಂಟ ಸಾಹಿಬ್ (7.6 ಮಿ ಮೀ) ಭಾರಿ ಮಳೆ ಸುರಿದಿದೆ.</p><p>ಈ ವರ್ಷದ ಮಳೆ ಸಂಬಂಧಿತ ಅವಘಡಗಳಲ್ಲಿ 49 ಮಂದಿ ಮೃತಪಟ್ಟಿದ್ದು, ₹389 ಕೋಟಿಗೂ ಅಧಿಕ ಆಸ್ತಿ ನಷ್ಟ ಸಂಭವಿಸಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>