ಮೃತ ಬಾಲಕ ಭಾದುರ್ ಸಿಂಗ್ ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ನಿವಾಸಿ. ಆತ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡು ತಿಂಗಳ ಜೆಇಇ ತರಬೇತಿಗಾಗಿ ಕೋಟಾಕ್ಕೆ ಬಂದಿದ್ದ. ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಮಹಾವೀರ ನಗರ ಪ್ರದೇಶದ ವಿದ್ಯಾರ್ಥಿ ನಿಯಲವೊಂದರಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.