<p><strong>ಜೈಪುರ</strong>: ಪ್ರಸಿದ್ಧ ರಾಜಸ್ಥಾನ ಮಾರ್ಬಲ್ನಲ್ಲಿ ಕೆತ್ತಿದ 18.5 ಅಡಿ ಉದ್ದದ ಕಾಳಿ ಮಾತೆಯ ಏಕಶಿಲಾ ವಿಗ್ರಹವು ರಾಜಸ್ಥಾನದಿಂದ ಕೇರಳಕ್ಕೆ ತರಲಾಗುತ್ತಿದೆ.</p><p> 18.5 ಅಡಿಯ ವಿಗ್ರಹ ಇತಿಹಾಸದಲ್ಲಿ ದಾಖಲಾಗಲಿದೆ. ತಿರುವನಂತಪುರ ಪೌರ್ಣಮಿಕವು ದೇಗುಲದಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.</p><p>ಜೈಪುರದ ಪ್ರಸಿದ್ಧ ಶಿಲ್ಪಿ ಮುಕೇಶ್ ಭಾರದ್ವಾಜ್ ಈ ವಿಗ್ರಹವನ್ನು ಕೆತ್ತಿದ್ದು, 30x20 ಅಡಿ ವಿಸ್ತೀರ್ಣದ 45-50 ಟನ್ ತೂಕದ ಒಂದೇ ಶಿಲೆಯನ್ನು ಇದಕ್ಕೆ ಬಳಸಲಾಗಿದೆ. </p><p>12 ಅಡಿ ಎತ್ತರದ ದುರ್ಗಾ ಮಾತೆ ಮತ್ತು ರಾಜ ಮಧಂಗಿ ದೇವಿ ವಿಗ್ರಹದ ಹಿಂಬದಿಯಲ್ಲಿ ಕಾಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.</p><p>'ಕಾಳಿ ದೇವಿಯ ಪ್ರತಿಷ್ಠಾಪನೆ ಮತ್ತು ದುರ್ಗಾ ಹಾಗೂ ಲಕ್ಷ್ಮಿ ದೇವತೆಗಳ ಪ್ರತಿಷ್ಠಾಪನಾ ಸಮಾರಂಭವು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಂತೆಯೇ ಇರುತ್ತದೆ. ಇದು ಶಕ್ತಿಯುತ ಮತ್ತು ಪೂಜ್ಯ ಹಿಂದೂ ದೇವತೆಗಳ ವಾಸಸ್ಥಾನವಾಗಲಿದೆ’ ಎಂದು ದೇವಸ್ಥಾನದ ಮುಖ್ಯಸ್ಥ ಎಂ.ಎಸ್. ಭುವನಚಂದ್ರನ್ ತಿಳಿಸಿದ್ದಾರೆ.</p><p>ಎಲ್ಲ ಮೂರು ಮೂರ್ತಿಗಳನ್ನು ಜೈಪುರದಿಂದಲೇ ತರಲಾಗುತ್ತಿದೆ.</p><p>ದೇವತೆಗಳ ವಿಗ್ರಹಗಳ ಜೊತೆ ಪುರಾಣದಲ್ಲಿ ನಂಬಲಾಗಿರುವಂತೆ ಶಕ್ತಿ ದೇವತೆಗಳ ವಾಹನಗಳಾದ ಸೊ'ಹ, ಹುಲಿ, ನವಿಲು ಮತ್ತು ಹಂಸದ ವಿಗ್ರಹಗಳನ್ನು ಸಹ ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.</p><p>ಭಾನುವಾರ ಪೂಜೆ ನೆರವೇರಿಸಿ ವಿಗ್ರಹಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ಪ್ರಸಿದ್ಧ ರಾಜಸ್ಥಾನ ಮಾರ್ಬಲ್ನಲ್ಲಿ ಕೆತ್ತಿದ 18.5 ಅಡಿ ಉದ್ದದ ಕಾಳಿ ಮಾತೆಯ ಏಕಶಿಲಾ ವಿಗ್ರಹವು ರಾಜಸ್ಥಾನದಿಂದ ಕೇರಳಕ್ಕೆ ತರಲಾಗುತ್ತಿದೆ.</p><p> 18.5 ಅಡಿಯ ವಿಗ್ರಹ ಇತಿಹಾಸದಲ್ಲಿ ದಾಖಲಾಗಲಿದೆ. ತಿರುವನಂತಪುರ ಪೌರ್ಣಮಿಕವು ದೇಗುಲದಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.</p><p>ಜೈಪುರದ ಪ್ರಸಿದ್ಧ ಶಿಲ್ಪಿ ಮುಕೇಶ್ ಭಾರದ್ವಾಜ್ ಈ ವಿಗ್ರಹವನ್ನು ಕೆತ್ತಿದ್ದು, 30x20 ಅಡಿ ವಿಸ್ತೀರ್ಣದ 45-50 ಟನ್ ತೂಕದ ಒಂದೇ ಶಿಲೆಯನ್ನು ಇದಕ್ಕೆ ಬಳಸಲಾಗಿದೆ. </p><p>12 ಅಡಿ ಎತ್ತರದ ದುರ್ಗಾ ಮಾತೆ ಮತ್ತು ರಾಜ ಮಧಂಗಿ ದೇವಿ ವಿಗ್ರಹದ ಹಿಂಬದಿಯಲ್ಲಿ ಕಾಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.</p><p>'ಕಾಳಿ ದೇವಿಯ ಪ್ರತಿಷ್ಠಾಪನೆ ಮತ್ತು ದುರ್ಗಾ ಹಾಗೂ ಲಕ್ಷ್ಮಿ ದೇವತೆಗಳ ಪ್ರತಿಷ್ಠಾಪನಾ ಸಮಾರಂಭವು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಂತೆಯೇ ಇರುತ್ತದೆ. ಇದು ಶಕ್ತಿಯುತ ಮತ್ತು ಪೂಜ್ಯ ಹಿಂದೂ ದೇವತೆಗಳ ವಾಸಸ್ಥಾನವಾಗಲಿದೆ’ ಎಂದು ದೇವಸ್ಥಾನದ ಮುಖ್ಯಸ್ಥ ಎಂ.ಎಸ್. ಭುವನಚಂದ್ರನ್ ತಿಳಿಸಿದ್ದಾರೆ.</p><p>ಎಲ್ಲ ಮೂರು ಮೂರ್ತಿಗಳನ್ನು ಜೈಪುರದಿಂದಲೇ ತರಲಾಗುತ್ತಿದೆ.</p><p>ದೇವತೆಗಳ ವಿಗ್ರಹಗಳ ಜೊತೆ ಪುರಾಣದಲ್ಲಿ ನಂಬಲಾಗಿರುವಂತೆ ಶಕ್ತಿ ದೇವತೆಗಳ ವಾಹನಗಳಾದ ಸೊ'ಹ, ಹುಲಿ, ನವಿಲು ಮತ್ತು ಹಂಸದ ವಿಗ್ರಹಗಳನ್ನು ಸಹ ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.</p><p>ಭಾನುವಾರ ಪೂಜೆ ನೆರವೇರಿಸಿ ವಿಗ್ರಹಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>