ಭುವನೇಶ್ವರ: ಒಡಿಶಾದ ಮೇರಮುಂಡಲಿ ಉಕ್ಕು ಕಾರ್ಖಾನೆಯಲ್ಲಿ ಆವಿ ಸೋರಿಕೆಯಾಗಿ 19 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಕಟಕ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾರ್ಖಾನೆಯಲ್ಲಿ ಊದುಕುಲುಮೆ ಪರಿಶೀಲಿಸುತ್ತಿದ್ದ ಕಾರ್ಮಿಕರು ಹಾಗೂ ಎಂಜಿನಿಯರ್ಗಳು ಗಾಯಗೊಂಡಿದ್ದಾರೆ ಎಂದು ಢೆಂಕನಾಲ್ ಎಸ್ಪಿ ಜ್ಞಾನರಂಜನ್ ಮೋಹಪಾತ್ರ ತಿಳಿಸಿದ್ದಾರೆ.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ ಎಂದು ಟಾಟಾ ಸ್ಟೀಲ್, ಪ್ರಕಟಣೆ ತಿಳಿಸಿದೆ.
ಅವಘಡದ ಹಿಂದಿನ ಕಾರಣ ತಿಳಿಯಲು ಆಂತರಿಕ ತನಿಖೆಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದೆ.