ಆಂಧ್ರಪ್ರದೇಶದ ಮೊಜೊ ಟಿವಿಯ ವರದಿಗಾರ್ತಿ ಕವಿತಾ ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತೆಯೊಬ್ಬರು ಪೊಲೀಸರ ಭದ್ರತೆಯಲ್ಲಿ ದೇವಸ್ಥಾನದತ್ತ ತೆರಳುತ್ತಿದ್ದಾರೆ. ಆ ಭಕ್ತೆಯ ಹೆಸರು ತಿಳಿದು ಬಂದಿಲ್ಲ. ಅವರು ಕಪ್ಪು ಉಡುಪು ಧರಿಸಿದ್ದು ಹೂವು, ತೆಂಗಿನ ಕಾಯಿ ಹಿಡಿದು ದೇವಾಲಯದತ್ತ ಸಾಗುತ್ತಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.