<p><strong>ಹೈದರಾಬಾದ್</strong>: ಅಪರಿಚಿತ ವ್ಯಕ್ತಿಗಳು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಸೇತುವೆಯೊಂದರ ಮೇಲಿಂದ 31 ನಾಯಿಗಳನ್ನು ಎಸೆದಿದ್ದು, ಅದರಲ್ಲಿ 20 ನಾಯಿಗಳು ಮೃತಪಟ್ಟು, 11 ಗಾಯಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಪ್ರಾಣಿದಯಾ ಸಂಘದ ಸ್ವಯಂ ಸೇವಕರು ದೂರು ದಾಖಲಿಸಿದ್ದು, ಎಡ್ಡುಮೈಲರಾಮ್ ಹಳ್ಳಿಯ ಬಳಿಯ ಸೇತುವೆ ಮೂಲಕ ನಾಯಿಗಳನ್ನು ಎಸೆಯಲಾಗಿದೆ. ಜನವರಿ 4ರಂದೇ ಘಟನೆ ವರದಿಯಾಗಿದೆ.</p><p>ಬಿಎನ್ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇಂದ್ರಕರಣ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.</p><p>ನಾಯಿಗಳನ್ನು ಬೇರೆಡೆ ಕೊಂದು, ಇಲ್ಲಿಗೆ ತಂದು ಎಸೆಯಲಾಗಿದೆಯೇ ಎಂಬ ಕೋನದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p><p>20 ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಯಿಗಳಿಗೆ ವಿಷವುಣಿಸಲಾಗಿದೆಯೇ ಎಂಬ ಬಗ್ಗೆ ಪರೀಕ್ಷೆಯಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.</p><p>31 ನಾಯಿಗಳ ಪೈಕಿ 20 ಮೃತಪಟ್ಟಿದ್ದು, 11 ಗಾಯಗೊಂಡಿವೆ. ಗಾಯಗೊಂಡ ನಾಯಿಗಳನ್ನು ಪ್ರಾಣಿದಯಾ ಸಂಘಕ್ಕೆ ಹಸ್ತಾಂತರಿಸಲಾಗಿದ್ದು, ನಗೊಲೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.</p><p>ಈ ಸಂಬಂದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಅಪರಿಚಿತ ವ್ಯಕ್ತಿಗಳು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಸೇತುವೆಯೊಂದರ ಮೇಲಿಂದ 31 ನಾಯಿಗಳನ್ನು ಎಸೆದಿದ್ದು, ಅದರಲ್ಲಿ 20 ನಾಯಿಗಳು ಮೃತಪಟ್ಟು, 11 ಗಾಯಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಪ್ರಾಣಿದಯಾ ಸಂಘದ ಸ್ವಯಂ ಸೇವಕರು ದೂರು ದಾಖಲಿಸಿದ್ದು, ಎಡ್ಡುಮೈಲರಾಮ್ ಹಳ್ಳಿಯ ಬಳಿಯ ಸೇತುವೆ ಮೂಲಕ ನಾಯಿಗಳನ್ನು ಎಸೆಯಲಾಗಿದೆ. ಜನವರಿ 4ರಂದೇ ಘಟನೆ ವರದಿಯಾಗಿದೆ.</p><p>ಬಿಎನ್ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇಂದ್ರಕರಣ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.</p><p>ನಾಯಿಗಳನ್ನು ಬೇರೆಡೆ ಕೊಂದು, ಇಲ್ಲಿಗೆ ತಂದು ಎಸೆಯಲಾಗಿದೆಯೇ ಎಂಬ ಕೋನದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p><p>20 ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಯಿಗಳಿಗೆ ವಿಷವುಣಿಸಲಾಗಿದೆಯೇ ಎಂಬ ಬಗ್ಗೆ ಪರೀಕ್ಷೆಯಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.</p><p>31 ನಾಯಿಗಳ ಪೈಕಿ 20 ಮೃತಪಟ್ಟಿದ್ದು, 11 ಗಾಯಗೊಂಡಿವೆ. ಗಾಯಗೊಂಡ ನಾಯಿಗಳನ್ನು ಪ್ರಾಣಿದಯಾ ಸಂಘಕ್ಕೆ ಹಸ್ತಾಂತರಿಸಲಾಗಿದ್ದು, ನಗೊಲೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.</p><p>ಈ ಸಂಬಂದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>