ಭಾರಿ ಪ್ರವಾಹದಿಂದಾಗಿ 54.11 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ 5,645 ನಿರಾಶ್ರಿತರ ಶಿಬಿರಗಳಲ್ಲಿ 12.47 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) 59 ತಂಡ ಹಾಗೂ 207 ದೋಣಿಗಳನ್ನು ನಿಯೋಜನೆ ಮಾಡಿದೆ.