<p><strong>ಪುಣೆ:</strong> ನಕಲು ಮತ್ತು ಕೃತಿಸ್ವಾಮ್ಯ(ಕಾಪಿರೈಟ್) ಉಲ್ಲಂಘನೆ ಪ್ರಕರಣದ ಆರೋಪಿಯೊಬ್ಬರು ಬಾಂಬೆ ಹೈಕೋರ್ಟ್ಗೆ ಪುಣೆ ನ್ಯಾಯಾಲಯದ ನ್ಯಾಯಾಧೀಶರ ನಕಲಿ ಸಹಿಯುಳ್ಳ ಖೋಟಾ ಆದೇಶ ತೋರಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.</p>.<p>ಸುಳ್ಳು ದಾಖಲೆ ನೀಡಿ ಜನವರಿಯಲ್ಲಿ ಜಾಮೀನು ಪಡೆದಿರುವ ಹರಿಭಾವ್ ಚೆಮ್ಟೆ ಎಂಬುವವರು ಇದೀಗ ತಲೆಮರೆಸಿಕೊಂಡಿದ್ದಾರೆ.</p>.<p>2022ರಲ್ಲಿ ಪುಣೆಯ ಸಿಟಿಆರ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯು ತನ್ನ ಬಣ್ಣದ ರೇಖಾಚಿತ್ರ(ಪೇಂಟಿಂಗ್) ಮತ್ತು ಡಿಸೈನ್ (ವಿನ್ಯಾಸ) ಅನ್ನು ಚೆನ್ನೈ ಮೂಲದ ಕಂಪನಿ ದುರ್ಬಳಕೆ ಮಾಡಿಕೊಂಡಿದೆ ಎಂದು ವಿಮಾಂತಲ್ ಠಾಣೆಗೆ ದೂರು ನೀಡಿತ್ತು.</p>.<p>ಸಿಟಿಆರ್ ಸಂಸ್ಥೆಯ ಗುಣಮಟ್ಟ ವಿಭಾಗದಲ್ಲಿದ್ದ ಚೆಮ್ಟೆ, ವಿನ್ಯಾಸವನ್ನು ಕಳವು ಮಾಡಿ ಚೆನ್ನೈ ಕಂಪನಿಗೆ ನೀಡಿರುವುದನ್ನು ಪೊಲೀಸರು ಪತ್ತೆಹಚ್ಚಿ, ಎಫ್ಐಆರ್ ಹಾಕಿದ್ದರು.</p>.<p>ಬಾಂಬೆ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಚೆಮ್ಟೆ, ಪುಣೆಯ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಕೈ ಬರವಣಿಗೆಯ ನಕಲು ಆದೇಶ ಪ್ರತಿಯನ್ನು ಸಲ್ಲಿಸಿದ್ದರು. ಜನವರಿ 17ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.</p>.<p>ನಕಲಿ ಆದೇಶ ಪ್ರತಿ ಸಲ್ಲಿಸಿದ್ದ ಬಗ್ಗೆ ಪ್ರಕರಣದ ಮೂಲ ಅರ್ಜಿದಾರರು ಬಾಂಬೆ ಹೈಕೋರ್ಟ್ ಗಮನಕ್ಕೆ ತಂದಿದ್ದರು. ನಿರೀಕ್ಷಣಾ ಜಾಮೀನು ವಜಾ ಮಾಡಿದ್ದ ಹೈಕೋರ್ಟ್, ವಂಚನೆ ಬಗ್ಗೆ ತನಿಖೆಗೆ ಆದೇಶಿಸಿದೆ. ವಂಚಕ ಚೆಮ್ಟೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ನಕಲು ಮತ್ತು ಕೃತಿಸ್ವಾಮ್ಯ(ಕಾಪಿರೈಟ್) ಉಲ್ಲಂಘನೆ ಪ್ರಕರಣದ ಆರೋಪಿಯೊಬ್ಬರು ಬಾಂಬೆ ಹೈಕೋರ್ಟ್ಗೆ ಪುಣೆ ನ್ಯಾಯಾಲಯದ ನ್ಯಾಯಾಧೀಶರ ನಕಲಿ ಸಹಿಯುಳ್ಳ ಖೋಟಾ ಆದೇಶ ತೋರಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.</p>.<p>ಸುಳ್ಳು ದಾಖಲೆ ನೀಡಿ ಜನವರಿಯಲ್ಲಿ ಜಾಮೀನು ಪಡೆದಿರುವ ಹರಿಭಾವ್ ಚೆಮ್ಟೆ ಎಂಬುವವರು ಇದೀಗ ತಲೆಮರೆಸಿಕೊಂಡಿದ್ದಾರೆ.</p>.<p>2022ರಲ್ಲಿ ಪುಣೆಯ ಸಿಟಿಆರ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯು ತನ್ನ ಬಣ್ಣದ ರೇಖಾಚಿತ್ರ(ಪೇಂಟಿಂಗ್) ಮತ್ತು ಡಿಸೈನ್ (ವಿನ್ಯಾಸ) ಅನ್ನು ಚೆನ್ನೈ ಮೂಲದ ಕಂಪನಿ ದುರ್ಬಳಕೆ ಮಾಡಿಕೊಂಡಿದೆ ಎಂದು ವಿಮಾಂತಲ್ ಠಾಣೆಗೆ ದೂರು ನೀಡಿತ್ತು.</p>.<p>ಸಿಟಿಆರ್ ಸಂಸ್ಥೆಯ ಗುಣಮಟ್ಟ ವಿಭಾಗದಲ್ಲಿದ್ದ ಚೆಮ್ಟೆ, ವಿನ್ಯಾಸವನ್ನು ಕಳವು ಮಾಡಿ ಚೆನ್ನೈ ಕಂಪನಿಗೆ ನೀಡಿರುವುದನ್ನು ಪೊಲೀಸರು ಪತ್ತೆಹಚ್ಚಿ, ಎಫ್ಐಆರ್ ಹಾಕಿದ್ದರು.</p>.<p>ಬಾಂಬೆ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಚೆಮ್ಟೆ, ಪುಣೆಯ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಕೈ ಬರವಣಿಗೆಯ ನಕಲು ಆದೇಶ ಪ್ರತಿಯನ್ನು ಸಲ್ಲಿಸಿದ್ದರು. ಜನವರಿ 17ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.</p>.<p>ನಕಲಿ ಆದೇಶ ಪ್ರತಿ ಸಲ್ಲಿಸಿದ್ದ ಬಗ್ಗೆ ಪ್ರಕರಣದ ಮೂಲ ಅರ್ಜಿದಾರರು ಬಾಂಬೆ ಹೈಕೋರ್ಟ್ ಗಮನಕ್ಕೆ ತಂದಿದ್ದರು. ನಿರೀಕ್ಷಣಾ ಜಾಮೀನು ವಜಾ ಮಾಡಿದ್ದ ಹೈಕೋರ್ಟ್, ವಂಚನೆ ಬಗ್ಗೆ ತನಿಖೆಗೆ ಆದೇಶಿಸಿದೆ. ವಂಚಕ ಚೆಮ್ಟೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>