<p><strong>ಮುಂಬೈ</strong>: ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಎನ್ಸಿಪಿ (ಎಸ್ಪಿ) ಬಣದ ನಾಯಕ ಶರದ್ ಪವಾರ್ ಅವರು ಹೇಳಿದ್ದಾರೆ.</p><p>ಬಾರಾಮತಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ‘ಅವರು (ಸುನೇತ್ರಾ) ಅವರು ಮಹಾರಾಷ್ಟ್ರ ಡಿಸಿಎಂ ಆಗಲಿದ್ದಾರೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದುಕೊಂಡಿದ್ದೇನೆ ಹೊರತು, ಅವರ ಬಣದ ಪಕ್ಷದಿಂದ ನನಗೇನು ಅಧಿಕೃತವಾಗಿ ತಿಳಿದು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.</p><p>ಎನ್ಸಿಪಿಯ ಎರಡೂ ಬಣಗಳನ್ನು ಒಗ್ಗೂಡಿಸುವುದು ಅಜಿತ್ ಪವಾರ್ ಕನಸಾಗಿತ್ತು. ಅದರ ಬಗ್ಗೆ ಅವರು ಆಶಾವಾದ ಹೊಂದಿದ್ದರು ಎಂದು ಹೇಳಿದರು.</p><p>ಅಜಿತ್ ಅಕಾಲಿಕ ನಿಧನದಿಂದ ಅವರ ಬಣದಿಂದ ಯಾರಾದರೂ ಡಿಸಿಎಂ ಆಗಲಿ ಎಂದು ಬಿಜೆಪಿ ಭಾವಿಸಿದಂತಿದೆ. ಪ್ರಪುಲ್ ಪಟೇಲ್, ಸುನೀಲ್ ತತ್ಕರೆ ಅವರು ಡಿಸಿಎಂ ಆಗಬಹುದು ಎಂಬ ಮಾತುಗಳನ್ನು ನಾನು ಈ ಮೊದಲು ಕೇಳಿದ್ದೆ ಎಂದು ಶರದ್ ಪವಾರ್ ಹೇಳಿದರು.</p><p>ಸುದ್ದಿಗೋಷ್ಠಿ ವೇಳೆ ಬಾರಾಮತಿಯ ಗೋವಿಂದ್ಬಾಗ್ನಲ್ಲಿ ಶರದ್ ಪವಾರ್ ಅವರನ್ನು ಅಜಿತ್ ಅವರ ಮಗ ಪಾರ್ಥ್ ಪವಾರ್ ಭೇಟಿಯಾದರು. ಈ ವೇಳೆ ಸಂಸದೆ ಸುಪ್ರಿಯಾ ಸುಳೆ, ಶಾಸಕರಾದ ರೋಹಿತ್ ಪವಾರ್, ಯುಗೇಂದ್ರ ಪವಾರ್ ಅವರು ಇದ್ದರು.</p><p>ರಾಜ್ಯಸಭೆ ಸದಸ್ಯೆಯಾಗಿರುವ ಸುನೇತ್ರಾ ಅವರು ಡಿಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳು ಬಿರುಸುಪಡೆದುಕೊಂಡಿವೆ. ಸದ್ಯ ಮಂಬೈನ ಅವರ ದೇವಗಿರಿ ನಿವಾಸದಲ್ಲಿ ಸುನೇತ್ರಾ ಅವರು ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಎನ್ಸಿಪಿ (ಎಸ್ಪಿ) ಬಣದ ನಾಯಕ ಶರದ್ ಪವಾರ್ ಅವರು ಹೇಳಿದ್ದಾರೆ.</p><p>ಬಾರಾಮತಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ‘ಅವರು (ಸುನೇತ್ರಾ) ಅವರು ಮಹಾರಾಷ್ಟ್ರ ಡಿಸಿಎಂ ಆಗಲಿದ್ದಾರೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದುಕೊಂಡಿದ್ದೇನೆ ಹೊರತು, ಅವರ ಬಣದ ಪಕ್ಷದಿಂದ ನನಗೇನು ಅಧಿಕೃತವಾಗಿ ತಿಳಿದು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.</p><p>ಎನ್ಸಿಪಿಯ ಎರಡೂ ಬಣಗಳನ್ನು ಒಗ್ಗೂಡಿಸುವುದು ಅಜಿತ್ ಪವಾರ್ ಕನಸಾಗಿತ್ತು. ಅದರ ಬಗ್ಗೆ ಅವರು ಆಶಾವಾದ ಹೊಂದಿದ್ದರು ಎಂದು ಹೇಳಿದರು.</p><p>ಅಜಿತ್ ಅಕಾಲಿಕ ನಿಧನದಿಂದ ಅವರ ಬಣದಿಂದ ಯಾರಾದರೂ ಡಿಸಿಎಂ ಆಗಲಿ ಎಂದು ಬಿಜೆಪಿ ಭಾವಿಸಿದಂತಿದೆ. ಪ್ರಪುಲ್ ಪಟೇಲ್, ಸುನೀಲ್ ತತ್ಕರೆ ಅವರು ಡಿಸಿಎಂ ಆಗಬಹುದು ಎಂಬ ಮಾತುಗಳನ್ನು ನಾನು ಈ ಮೊದಲು ಕೇಳಿದ್ದೆ ಎಂದು ಶರದ್ ಪವಾರ್ ಹೇಳಿದರು.</p><p>ಸುದ್ದಿಗೋಷ್ಠಿ ವೇಳೆ ಬಾರಾಮತಿಯ ಗೋವಿಂದ್ಬಾಗ್ನಲ್ಲಿ ಶರದ್ ಪವಾರ್ ಅವರನ್ನು ಅಜಿತ್ ಅವರ ಮಗ ಪಾರ್ಥ್ ಪವಾರ್ ಭೇಟಿಯಾದರು. ಈ ವೇಳೆ ಸಂಸದೆ ಸುಪ್ರಿಯಾ ಸುಳೆ, ಶಾಸಕರಾದ ರೋಹಿತ್ ಪವಾರ್, ಯುಗೇಂದ್ರ ಪವಾರ್ ಅವರು ಇದ್ದರು.</p><p>ರಾಜ್ಯಸಭೆ ಸದಸ್ಯೆಯಾಗಿರುವ ಸುನೇತ್ರಾ ಅವರು ಡಿಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳು ಬಿರುಸುಪಡೆದುಕೊಂಡಿವೆ. ಸದ್ಯ ಮಂಬೈನ ಅವರ ದೇವಗಿರಿ ನಿವಾಸದಲ್ಲಿ ಸುನೇತ್ರಾ ಅವರು ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>