ಅಧಿಕಾರಕ್ಕೆ ನಿಯಂತ್ರಣ ಹೇರುವ ಜತೆಗೆ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.ದೆಹಲಿ ಸಿಬಿಐ ಕಚೇರಿಯ ಹತ್ತನೇ ಮಹಡಿಯಲ್ಲಿರುವ ಕಚೇರಿಯಲ್ಲಿಅಲೋಕ್ ವರ್ಮಾ ಮತ್ತೆ ಅಧಿಕಾರ ವಹಿಸಿ ಎರಡನೇ ದಿನಗಳಲ್ಲಿ ಸ್ಥಾನದಿಂದ ತೆರವುಗೊಂಡರು. ಪ್ರಧಾನಿ ಮೋದಿ, ಮುಖ್ಯ ನ್ಯಾಯಮೂರ್ತಿ ನಿರ್ದೇಶನದ ಮೇರೆಗೆ ಹಾಜರಿದ್ದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಹಾಗೂ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಜ.10ರಂದು ವರ್ಮಾ ಅವರನ್ನು ಪದಚ್ಯುತಗೊಳಿಸಿತು.