ಉಗ್ರ ದಾಳಿಯ ಘಟನೆಯ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಇದು ಕಳವಳಕಾರಿ ವಿಷಯವಾಗಿದ್ದು, 2023ರ ಜನವರಿ ಒಂದರಿಂದ ನಮ್ಮ 25 ರಕ್ಷಣಾ ಸಿಬ್ಬಂದಿ ಮತ್ತು ಎಂಟು ನಾಗರಿಕರು ರಜೌರಿ–ಪೂಂಛ್ ಭಾಗದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಈ ಪ್ರದೇಶದಲ್ಲಿ 2007ರಿಂದ 2014ರವರೆಗೆ ಯಾವುದೇ ದೊಡ್ಡ ಭಯೋತ್ಪಾದನಾ ಕೃತ್ಯ ನಡೆದಿರಲಿಲ್ಲ’ ಎಂದು ತಿಳಿಸಿದ್ದಾರೆ.