ಈ ಅಪಘಾತವೆಸಗಿದ ಬಾಲಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹರೀಶ್ ಚಂದ್ರ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಪುಣೆ ಪೋಶೆ ಕಾರು ಅಪಘಾತ ಘಟನೆಯ ಬಳಿಕ ಈ ಹಳೆಯ ಪ್ರಕರಣ ಮತ್ತೆ ತನಿಖೆಯ ಜಾಡು ಹಿಡಿದಿದ್ದು ಇದೀಗ ಮುನ್ನಲೆಗೆ ಬಂದಿದೆ.
ಕಳೆದ ಅಕ್ಟೋಬರ್ನಲ್ಲಿ ಕಾನ್ಪುರದ ಬರ್ರಾ ಪ್ರದೇಶದಲ್ಲಿ ಈ ಬಾಲಕ ವೇಗವಾಗಿ ಕಾರು ಚಲಾಯಿಸಿ ಇಬ್ಬರಿಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ಅವರು ಮೃತಪಟ್ಟಿದ್ದರು. ಮತ್ತೆ ಅದೇ ಬಾಲಕ ಮಾರ್ಚ್ನಲ್ಲಿ ನವಾಬ್ಗಂಜ್ ಪ್ರದೇಶದಲ್ಲಿ ವೇಗವಾಗಿ ಕಾರು ಚಲಾಯಿಸಿ ನಾಲ್ವರಿಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ಅವರು ಗಾಯಗೊಂಡಿದ್ದರು. ನಂತರ ಪೊಲೀಸರು ಬಾಲಕನನ್ನು ಬಂಧಿಸಿ ಬಾಲ ನ್ಯಾಯ ಮಂಡಳಿ ನಿಲಯಕ್ಕೆ ಕಳುಹಿಸಿದ್ದಾರೆ.
ಬಾಲಕನ ತಂದೆ ವೈದ್ಯರಾಗಿದ್ದಾರೆ. ಎರಡನೇ ಸಲ ಮಗನಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಲ್ಲಿ ಬಾಲಕನ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹರೀಶ್ ಚಂದ್ರ ತಿಳಿಸಿದರು.