<p><strong>ಶ್ರೀನಗರ</strong>: ಅಮರನಾಥ ಯಾತ್ರೆ ಆರಂಭಕ್ಕೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಭದ್ರತಾ ಪಡೆಗಳು ಉಧಂಪುರ ಜಿಲ್ಲೆಯ ಬಸಂತಗಡ ಪ್ರದೇಶದಲ್ಲಿ ಗುರುವಾರ ಉಗ್ರರ ವಿರುದ್ಧ ’ಆಪರೇಷನ್ ಬಿಹಾಲಿ‘ ಕಾರ್ಯಾಚರಣೆ ನಡೆಸಿತು. </p>.<p>ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸರ ಜಂಟಿ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಬಸಂತಗಡ ಪ್ರದೇಶದ ಬಿಹಾಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿರುವುದರಿಂದ ’ಆಪರೇಷನ್ ಬಿಹಾಲಿ’ ಎಂದು ಹೆಸರಿಡಲಾಗಿದೆ.</p>.<p class="title">‘ನಾಲ್ವರು ಉಗ್ರರ ತಂಡವೊಂದನ್ನು ಭದ್ರತಾ ಪಡೆ ಸುತ್ತುವರೆದಿದೆ. ಪ್ರತಿಕೂಲ ಹವಾಮಾನವು ಕಾರ್ಯಾಚರಣೆಗೆ ತುಸು ಅಡ್ಡಿಯಾಗಿದೆ’ ಎಂದು ಜಮ್ಮು ವಲಯದ ಐಜಿಪಿ ಭೀಮ್ ಸೇನ್ ಖಚಿತಪಡಿಸಿದ್ದಾರೆ. </p>.<p class="title">ಬಿಹಾಲಿ ಪ್ರದೇಶದ ಮೂಲಕ ಅಮರನಾಥ ಯಾತ್ರಿಕರು ಹಾದು ಹೋಗುತ್ತಾರೆ. ಅರಣ್ಯ, ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಿದ್ದು, ಯಾತ್ರಿಕರ ಸುರಕ್ಷತೆಗೆ ಭದ್ರತಾ ಪಡೆಗಳು ಈ ಬಾರಿ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಅಮರನಾಥ ಯಾತ್ರೆ ಆರಂಭಕ್ಕೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಭದ್ರತಾ ಪಡೆಗಳು ಉಧಂಪುರ ಜಿಲ್ಲೆಯ ಬಸಂತಗಡ ಪ್ರದೇಶದಲ್ಲಿ ಗುರುವಾರ ಉಗ್ರರ ವಿರುದ್ಧ ’ಆಪರೇಷನ್ ಬಿಹಾಲಿ‘ ಕಾರ್ಯಾಚರಣೆ ನಡೆಸಿತು. </p>.<p>ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸರ ಜಂಟಿ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಬಸಂತಗಡ ಪ್ರದೇಶದ ಬಿಹಾಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿರುವುದರಿಂದ ’ಆಪರೇಷನ್ ಬಿಹಾಲಿ’ ಎಂದು ಹೆಸರಿಡಲಾಗಿದೆ.</p>.<p class="title">‘ನಾಲ್ವರು ಉಗ್ರರ ತಂಡವೊಂದನ್ನು ಭದ್ರತಾ ಪಡೆ ಸುತ್ತುವರೆದಿದೆ. ಪ್ರತಿಕೂಲ ಹವಾಮಾನವು ಕಾರ್ಯಾಚರಣೆಗೆ ತುಸು ಅಡ್ಡಿಯಾಗಿದೆ’ ಎಂದು ಜಮ್ಮು ವಲಯದ ಐಜಿಪಿ ಭೀಮ್ ಸೇನ್ ಖಚಿತಪಡಿಸಿದ್ದಾರೆ. </p>.<p class="title">ಬಿಹಾಲಿ ಪ್ರದೇಶದ ಮೂಲಕ ಅಮರನಾಥ ಯಾತ್ರಿಕರು ಹಾದು ಹೋಗುತ್ತಾರೆ. ಅರಣ್ಯ, ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಿದ್ದು, ಯಾತ್ರಿಕರ ಸುರಕ್ಷತೆಗೆ ಭದ್ರತಾ ಪಡೆಗಳು ಈ ಬಾರಿ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>