<p class="title"><strong>ನವದೆಹಲಿ</strong>: ‘ದೇಶದ ಹೆಸರಾಂತ ವೈದ್ಯಕೀಯ ಸಂಸ್ಥೆ ಏಮ್ಸ್ಗೆತದ್ರೂಪಿ ಚೆಕ್’ಗಳನ್ನು ಬಳಸಿ ₹12 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಎಸ್ಬಿಐನಲ್ಲಿರುವ ಏಮ್ಸ್ನ 2 ಖಾತೆಗಳಿಂದ ಹಣ ಪಡೆಯಲಾಗಿದೆ.</p>.<p class="title">ನವದೆಹಲಿಯಿಂದ ಹೊರಗಿರುವ ಎಸ್ಬಿಐನ ಶಾಖೆಗಳಲ್ಲಿ ಈ ಚೆಕ್ಗಳನ್ನು ನೀಡಿ ಹಣ ಪಡೆಯಲಾಗಿದೆ. ವಂಚನೆ ಬೆಳಕಿಗೆ ಬಂದ ನಂತರವೂ ₹ 29 ಕೋಟಿ ತೆಗೆಯಲು ವಂಚಕರು ಯತ್ನಿಸಿ ವಿಫಲವಾಗಿದ್ದಾರೆ.</p>.<p class="title">ತದ್ರೂಪಿ ಚೆಕ್ಗಳು ಮೂಲ ಚೆಕ್ಗಳನ್ನೇ ಹೋಲುತ್ತಿವೆ. ಚೆಕ್ಗಳ ತೀರುವಳಿಗೆ ಮೊದಲು ಬ್ಯಾಂಕ್ ಕೈಗೊಳ್ಳುವ ಯು.ವಿ ಕಿರಣ ಪರೀಕ್ಷೆಯನ್ನು ಅವು ಯಶಸ್ವಿಯಾಗಿ ಹಾದುಹೋಗಿದೆ ಎಂದು ತಿಳಿದುಬಂದಿದೆ.</p>.<p class="title">ಆಸ್ಪತ್ರೆಯ ಆಡಳಿತ ಈ ಕುರಿತು ದೆಹಲಿ ಪೊಲೀಸ್ನ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಿದೆ. ಅಧಿಕೃತ ಸಹಿದಾರರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನ್ನದೇ ಬ್ಯಾಂಕ್ನ ಅನ್ಯ ಶಾಖೆಗಳ ಚೆಕ್ಗಳ ತೀರುವಳಿಗೂ ಮೊದಲು ಪಾಲಿಸಬೇಕಾದ ಶಿಷ್ಟಾಚಾರವನ್ನು ಬ್ಯಾಂಕ್ ಪಾಲಿಸಿಲ್ಲ ಎಂದು ಏಮ್ಸ್ ದೂರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ‘ದೇಶದ ಹೆಸರಾಂತ ವೈದ್ಯಕೀಯ ಸಂಸ್ಥೆ ಏಮ್ಸ್ಗೆತದ್ರೂಪಿ ಚೆಕ್’ಗಳನ್ನು ಬಳಸಿ ₹12 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಎಸ್ಬಿಐನಲ್ಲಿರುವ ಏಮ್ಸ್ನ 2 ಖಾತೆಗಳಿಂದ ಹಣ ಪಡೆಯಲಾಗಿದೆ.</p>.<p class="title">ನವದೆಹಲಿಯಿಂದ ಹೊರಗಿರುವ ಎಸ್ಬಿಐನ ಶಾಖೆಗಳಲ್ಲಿ ಈ ಚೆಕ್ಗಳನ್ನು ನೀಡಿ ಹಣ ಪಡೆಯಲಾಗಿದೆ. ವಂಚನೆ ಬೆಳಕಿಗೆ ಬಂದ ನಂತರವೂ ₹ 29 ಕೋಟಿ ತೆಗೆಯಲು ವಂಚಕರು ಯತ್ನಿಸಿ ವಿಫಲವಾಗಿದ್ದಾರೆ.</p>.<p class="title">ತದ್ರೂಪಿ ಚೆಕ್ಗಳು ಮೂಲ ಚೆಕ್ಗಳನ್ನೇ ಹೋಲುತ್ತಿವೆ. ಚೆಕ್ಗಳ ತೀರುವಳಿಗೆ ಮೊದಲು ಬ್ಯಾಂಕ್ ಕೈಗೊಳ್ಳುವ ಯು.ವಿ ಕಿರಣ ಪರೀಕ್ಷೆಯನ್ನು ಅವು ಯಶಸ್ವಿಯಾಗಿ ಹಾದುಹೋಗಿದೆ ಎಂದು ತಿಳಿದುಬಂದಿದೆ.</p>.<p class="title">ಆಸ್ಪತ್ರೆಯ ಆಡಳಿತ ಈ ಕುರಿತು ದೆಹಲಿ ಪೊಲೀಸ್ನ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಿದೆ. ಅಧಿಕೃತ ಸಹಿದಾರರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನ್ನದೇ ಬ್ಯಾಂಕ್ನ ಅನ್ಯ ಶಾಖೆಗಳ ಚೆಕ್ಗಳ ತೀರುವಳಿಗೂ ಮೊದಲು ಪಾಲಿಸಬೇಕಾದ ಶಿಷ್ಟಾಚಾರವನ್ನು ಬ್ಯಾಂಕ್ ಪಾಲಿಸಿಲ್ಲ ಎಂದು ಏಮ್ಸ್ ದೂರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>