ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಫರೀದ್ಕೋಟ್ನಲ್ಲಿ ಸಿಖ್ಖ ಸಮುದಾಯ ಪ್ರತಿಭಟಿಸಿತ್ತು. ಆಗ ನಡೆದ ಪೊಲೀಸ್ ಫೈರಿಂಗ್ನಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ಕುರಿತಂತೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ರಂಜಿತ್ ಸಿಂಗ್ ಆಯೋಗವನ್ನು ರಚಿಸಲಾಗಿತ್ತು.