ಕೊಚ್ಚಿ: ಶಬರಿಮಲೆ ದೇಗುಲ ಧರ್ಮ ಸಾಮರಸ್ಯದ ಪ್ರತೀಕವಾಗಿದೆ. ಈ ದೇವಾಲಯ ಎಲ್ಲರಿಗೂ ಸೇರಿದ್ದು. ಯಾವ ರೀತಿಯ ಭಕ್ತರು ಬಂದರೂ ಅವರಿಗೆ ರಕ್ಷಣೆ ನೀಡಬೇಕು. ಇರುಮುಡಿ ಇಲ್ಲದೆಯೂ ಶಬರಿಮಲೆಗೆ ಹೋಗಬಹುದು.ಹದಿನೆಂಟು ಮೆಟ್ಟಿಲು ಹತ್ತುವುದಾದರೆ ಮಾತ್ರ ಇರುಮುಡಿ ಕಡ್ಡಾಯ. ಇರುಮುಡಿ ಇಲ್ಲದೇ ಇದ್ದವರು ದೇವಸ್ಥಾನದ ಇನ್ನೊಂದು ಬಾಗಿಲು ಮೂಲಕ ಪ್ರವೇಶಿಸಬೇಕು. ಇದು ದೇವಾಲಯದಲ್ಲಿ ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ರೀತಿಯಾಗಿದೆ ಎಂದು ಕೇರಳಹೈಕೋರ್ಟ್ ಹೇಳಿದೆ.