‘ಕೆಲವು ಆಂತರಿಕ ಭಿನ್ನಾಭಿಪ್ರಾಯಗಳು ಇಂಡಿಯಾ ಮೈತ್ರಿಕೂಟದಲ್ಲಿ ಇವೆ. ಇಂಥದ್ದು ಮೈತ್ರಿಕೂಟದಲ್ಲಿ ನಡೆಯಬಾರದಿತ್ತು. ಆದರೆ, ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಹೇಗೆ ಜಗಳವಾಡುತ್ತಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಉತ್ತರಪ್ರದೇಶದ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಎರಡೂ ಪಕ್ಷಗಳು ಹೇಳುತ್ತಿವೆ. ಇಂಥ ಬೆಳವಣಿಗೆ ಮೈತ್ರಿಕೂಟಕ್ಕೆ ಒಳ್ಳೆಯದಲ್ಲ. ಈ ಚುನಾವಣೆ ಬಳಿಕ ಬಹುಶಃ ನಾವೆಲ್ಲ ಮತ್ತೆ ಭೇಟಿಯಾಗಿ, ಒಂದಾಗಿ ಕೆಲಸ ಮಾಡಬಹುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.