‘ಇದೊಂದು ಅಸಹ್ಯಕರ ಹೇಳಿಕೆ. ಕಾಂಗ್ರೆಸ್, ಗಾಂಧಿ ಮತ್ತು ನೆಹರು ಕುಟುಂಬದವರ ಹೊರತಾಗಿ ಉಳಿದ ನಾಯಕರನ್ನು ಕೆಣಕುವಕೆಲಸ ಮಾಡುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ. ‘ಕಾಂಗ್ರೆಸ್ ನಾಯಕರ ವಿವಿಧ ಸಂಬಂಧಗಳು ಪ್ರಪಂಚಕ್ಕೆ ತಿಳಿದಿದೆ. ಆದರೆ, ನಮಗೆ ಕೆಸರೆರಚಲು ಇಷ್ಟವಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ತಿಳಿಸಿದ್ದಾರೆ.