<p><strong>ನವದೆಹಲಿ:</strong> ಭೂ ಮತ್ತು ಸಾಗರ ಗಡಿ ಭದ್ರತೆಗೆ ಒತ್ತು ನೀಡಲಾಗುತ್ತಿದ್ದು, ಈ ವಿಚಾರದಲ್ಲಿ ಸಡಿಲಿಕೆಯನ್ನು ಒಪ್ಪಲಾಗದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p>.<p>ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಬಿಪಿಆರ್ಡಿ)51ನೇ ಸಂಸ್ಥಾಪನಾ ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ʼಭೂ ಮತ್ತು ಸಾಗರ ಗಡಿಗಳು ಸುರಕ್ಷಿತವಾಗಿರಬೇಕು. ಈ ಕ್ಷೇತ್ರಗಳಲ್ಲಿ ಸಡಿಲಿಕೆಇರಬಾರದುʼ ಎಂದು ತಿಳಿಸಿದ್ದಾರೆ.</p>.<p>ಮುಂದುವರಿದು,ʼಪ್ರಜಾಪ್ರಭುತ್ವವೆಂದರೆ, ಜನರು ನಾಯಕರನ್ನು ಚುನಾಯಿಸುವುದಷ್ಟೇ ಅಲ್ಲ. ಚುನಾಯಿತರಾದ ನಾಯಕರು ನಾಗರಿಕರಿಗೆ ಭದ್ರತೆಯನ್ನೂ ಒದಗಿಸಬೇಕು. ಪ್ರಜಾಪ್ರಭುತ್ವದ ಪ್ರಗತಿಗೆ ಇದರಿಂದ ನೆರವಾಗಲಿದೆʼ ಎಂದಿದ್ದಾರೆ.</p>.<p>ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅನುಕೂಲವಾಗುವಂತೆ ಪೊಲೀಸ್ ಸಂಸ್ಥೆಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಬಿಪಿಆರ್ಡಿ ಪಾತ್ರ ಮುಖ್ಯವಾದುದು ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.</p>.<p>ʼಪೊಲೀಸರು ಕಠಿಣ ಕೆಲಸ ಮಾಡುತ್ತಾರೆ. ದೀಪಾವಳಿ, ರಕ್ಷಾಬಂಧನ ಮತ್ತು ಇನ್ನಿತರೆ ಸಂದರ್ಭಗಳಲ್ಲಿಯೂ ಅವರಿಗೆ ರಜೆ ತೆಗೆದುಕೊಳ್ಳಲು ಸಾಧ್ಯವಾಗದು. ಸರ್ಕಾರಿನೌಕರರ ಪೈಕಿ ಪೊಲೀಸರು ಎಲ್ಲರಿಗಿಂತ ಕಠಿಣ ಕೆಲಸ ಮಾಡುತ್ತಾರೆ ಎಂದುಭಾವಿಸುತ್ತೇನೆʼ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭೂ ಮತ್ತು ಸಾಗರ ಗಡಿ ಭದ್ರತೆಗೆ ಒತ್ತು ನೀಡಲಾಗುತ್ತಿದ್ದು, ಈ ವಿಚಾರದಲ್ಲಿ ಸಡಿಲಿಕೆಯನ್ನು ಒಪ್ಪಲಾಗದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p>.<p>ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಬಿಪಿಆರ್ಡಿ)51ನೇ ಸಂಸ್ಥಾಪನಾ ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ʼಭೂ ಮತ್ತು ಸಾಗರ ಗಡಿಗಳು ಸುರಕ್ಷಿತವಾಗಿರಬೇಕು. ಈ ಕ್ಷೇತ್ರಗಳಲ್ಲಿ ಸಡಿಲಿಕೆಇರಬಾರದುʼ ಎಂದು ತಿಳಿಸಿದ್ದಾರೆ.</p>.<p>ಮುಂದುವರಿದು,ʼಪ್ರಜಾಪ್ರಭುತ್ವವೆಂದರೆ, ಜನರು ನಾಯಕರನ್ನು ಚುನಾಯಿಸುವುದಷ್ಟೇ ಅಲ್ಲ. ಚುನಾಯಿತರಾದ ನಾಯಕರು ನಾಗರಿಕರಿಗೆ ಭದ್ರತೆಯನ್ನೂ ಒದಗಿಸಬೇಕು. ಪ್ರಜಾಪ್ರಭುತ್ವದ ಪ್ರಗತಿಗೆ ಇದರಿಂದ ನೆರವಾಗಲಿದೆʼ ಎಂದಿದ್ದಾರೆ.</p>.<p>ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅನುಕೂಲವಾಗುವಂತೆ ಪೊಲೀಸ್ ಸಂಸ್ಥೆಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಬಿಪಿಆರ್ಡಿ ಪಾತ್ರ ಮುಖ್ಯವಾದುದು ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.</p>.<p>ʼಪೊಲೀಸರು ಕಠಿಣ ಕೆಲಸ ಮಾಡುತ್ತಾರೆ. ದೀಪಾವಳಿ, ರಕ್ಷಾಬಂಧನ ಮತ್ತು ಇನ್ನಿತರೆ ಸಂದರ್ಭಗಳಲ್ಲಿಯೂ ಅವರಿಗೆ ರಜೆ ತೆಗೆದುಕೊಳ್ಳಲು ಸಾಧ್ಯವಾಗದು. ಸರ್ಕಾರಿನೌಕರರ ಪೈಕಿ ಪೊಲೀಸರು ಎಲ್ಲರಿಗಿಂತ ಕಠಿಣ ಕೆಲಸ ಮಾಡುತ್ತಾರೆ ಎಂದುಭಾವಿಸುತ್ತೇನೆʼ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>