‘ಪ್ರಕರಣದ ತನಿಖೆಗೆ ಕೇಂದ್ರದಿಂದ ರಚಿಸಿದ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳಿಂದ ವರದಿಗಳನ್ನು ಪಡೆದ ನಂತರ, ಕಂಪನಿಯ ಉತ್ತರವನ್ನು ಕೇಳುತ್ತೇವೆ. ಆ ಉತ್ತರಗಳನ್ನು ತಜ್ಞರು ಪರಿಶೀಲಿಸುತ್ತಾರೆ. ಸಮಿತಿಗಳು ಯಾವುದೇ ಕ್ರಮಗಳನ್ನು ಶಿಫಾರಸು ಮಾಡಿದರೂ, ಆ ಪ್ರಕ್ರಿಯೆಗಳು ಪಾರದರ್ಶಕವಾಗಿ ಕಾರ್ಯಗತಗೊಳ್ಳುತ್ತವೆ’ ಎಂದು ಅವರು ಹೇಳಿದ್ದಾರೆ.