ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪಿ. ಸತ್ಯನಾರಾಯಣರೆಡ್ಡಿ , ವಿ ವೆಂಕಟೇಶ್ (ಅನಕಾಪಲ್ಲಿ), ಕೆ. ಲಾವಣ್ಯ (ಏಲೂರು) ಮತ್ತು ಜಿ. ಅಲೆಕ್ಸಾಂಡರ್ ಸುಧಾಕರ್ (ನರಸರಾವ್ಪೇಟೆ) ಅಭ್ಯರ್ಥಿಯಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ಬುಧವಾರ ತಿಳಿಸಿದ್ದಾರೆ.
12 ವಿಧಾನಸಭಾ ಅಭ್ಯರ್ಥಿಗಳ ಪೈಕಿ ಇತ್ತೀಚೆಗೆ ವೈಎಸ್ಆರ್ಸಿಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕೆ. ಕೃಪಾರಾಣಿ ಹಾಗೂ ಎಂ.ಎಸ್ ಬಾಬು ಅವರಿಗೆ ಟಿಕೆಟ್ ನೀಡಲಾಗಿದೆ.