<p><strong>ನವದೆಹಲಿ:</strong> ಕೋವಿಡ್–19 ಸೋಂಕು ಕೇಂದ್ರವಾದ ಚೀನಾ ಮತ್ತು ಜಪಾನ್ ಕಡಲ ತೀರದಲ್ಲಿ ಲಂಗರು ಹಾಕಿರುವ ಐಷಾರಾಮಿ ಹಡಗಿನಿಂದ 192 ಭಾರತೀಯರನ್ನು ಸರ್ಕಾರವು ದೇಶಕ್ಕೆ ಕರೆ ತಂದಿದೆ. ಇದೇ 5ರಿಂದಲೇ ಐಷಾರಾಮಿ ಹಡಗನ್ನು ಜಪಾನ್ ಕಡಲ ತೀರದಲ್ಲಿಯೇ ನಿಲ್ಲಿಸಲಾಗಿದೆ. ಈ ಹಡಗಿನಲ್ಲಿ ಇದ್ದ ಹಲವು ಮಂದಿಗೆ ಸೋಂಕು ತಗಲಿತ್ತು.</p>.<p>ಕೊರೊನಾ ವೈರಸ್ ಪಿಡುಗು ಆರಂಭವಾದ ಚೀನಾದ ಹುಬೆ ಪ್ರಾಂತ್ಯ<br />ದಲ್ಲಿದ್ದ 73 ಭಾರತೀಯರನ್ನು ಸಿ–17 ಸೇನಾ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ವಾಯುಪಡೆಯ ಈ ವಿಮಾನವು ವುಹಾನ್ನಿಂದ ದೆಹಲಿಗೆ ಗುರುವಾರ ಬಂದಿದೆ. ಬೀಜಿಂಗ್ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೂವರು ಅಧಿಕಾರಿಗಳೂ ವಿಮಾನದಲ್ಲಿ ಬಂದಿದ್ದಾರೆ. ಭಾರತೀಯರ ತೆರವು ಕಾರ್ಯಾಚರಣೆಯ ಉಸ್ತುವಾರಿಗಾಗಿ ಈ ಅಧಿಕಾರಿಗಳು ಬೀಜಿಂಗ್ನಿಂದ ವುಹಾನ್ಗೆ ಹೋಗಿದ್ದರು.</p>.<p>ವುಹಾನ್ನಲ್ಲಿದ್ದ ಇತರ ದೇಶಗಳ ಕೆಲವರನ್ನೂ ವಿಮಾನದಲ್ಲಿ ಕರೆತರಲಾಗಿದೆ. ಬಾಂಗ್ಲಾದೇಶದ 23, ಚೀನಾದ ಆರು, ಮ್ಯಾನ್ಮಾರ್ ಮತ್ತು ಮಾಲ್ಡೀವ್ಸ್ನ ತಲಾ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ, ಅಮೆರಿಕ, ಮಡಗಾಸ್ಕರ್ನ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.</p>.<p>ಭಾರತದ ವಿಮಾನದಲ್ಲಿ ಬಂದ ಆರು ಚೀನೀಯರು, ತೆರವು ಮಾಡಲಾದ ವ್ಯಕ್ತಿಗಳ ಗಂಡ/ಹೆಂಡತಿ ಅಥವಾ ಮಕ್ಕಳು ಎಂದು ಮೂಲಗಳು ಹೇಳಿವೆ.</p>.<p>ಜಪಾನ್ನಿಂದ ಬಂದ ಇನ್ನೊಂದು ವಿಮಾನ ಕೂಡ ಗುರುವಾರವೇ ದೆಹಲಿಗೆ ಬಂತು. ಜಪಾನ್ನ ಯೊಕೊಹಾಮಾದಲ್ಲಿ ಲಂಗರು ಹಾಕಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇದ್ದ 119 ಭಾರತೀಯರನ್ನು ಈ ವಿಮಾನವು ಕರೆ ತಂದಿದೆ.<br />ಇವರಲ್ಲಿ 113 ಮಂದಿ ಹಡಗಿನ ಸಿಬ್ಬಂದಿಯಾಗಿದ್ದರೆ, ಉಳಿದವರು ಪ್ರಯಾಣಿಕರಾಗಿದ್ದರು. ಶ್ರೀಲಂಕಾದ ಇಬ್ಬರು, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ ತಲಾ ಒಬ್ಬರನ್ನು ಕೂಡ ಏರ್ ಇಂಡಿಯಾ ವಿಮಾನದಲ್ಲಿ ಕರೆತರಲಾಗಿದೆ.</p>.<p>ಈ ಹಡಗಿನಲ್ಲಿ ಭಾರತದ 138 ಮಂದಿ ಇದ್ದರು. ಅವರಲ್ಲಿ 16 ಮಂದಿಯಲ್ಲಿ (ಈ ಎಲ್ಲರೂ ಹಡಗಿನ ಸಿಬ್ಬಂದಿ) ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರಿಗೆ ಜಪಾನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಎಲ್ಲರ ಜತೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.</p>.<p>ಇದಕ್ಕೂ ಮೊದಲು, 647 ಭಾರತೀಯರನ್ನು ಚೀನಾದಿಂದ ಕರೆತರಲಾಗಿತ್ತು</p>.<p>ಭಾರತವು ಚೀನಾಕ್ಕೆ 15 ಟನ್ಗಳಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿದೆ</p>.<p><strong>14 ದಿನ ಪ್ರತ್ಯೇಕ ವಾಸ</strong></p>.<p>ದೆಹಲಿಗೆ ಬಂದಿರುವ ಎಲ್ಲರನ್ನೂ ಮುಂದಿನ 14 ದಿನ ಪ್ರತ್ಯೇಕವಾಗಿ ಇರಿಸಲಾಗುವುದು. ಇಂಡೊ–ಟಿಬೆಟನ್ ಗಡಿ ಪೊಲೀಸ್ ಪಡೆಯು ದೆಹಲಿಯ ಛಾವ್ಲಾದಲ್ಲಿ ರೂಪಿಸಿರುವ ಕೇಂದ್ರದಲ್ಲಿ ಚೀನಾದಿಂದ ಬಂದವರನ್ನು ಇರಿಸಲಾಗುವುದು. ಭಾರತೀಯ ಸೇನೆಯು ಹರಿಯಾಣದ ಮನೇಸರ್ನಲ್ಲಿ ನಿರ್ಮಿಸಿರುವ ಪ್ರತ್ಯೇಕ ಕೇಂದ್ರದಲ್ಲಿ ಜಪಾನ್ನಿಂದ ಬಂದವರನ್ನು ಇರಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೋವಿಡ್–19 ಸೋಂಕು ಕೇಂದ್ರವಾದ ಚೀನಾ ಮತ್ತು ಜಪಾನ್ ಕಡಲ ತೀರದಲ್ಲಿ ಲಂಗರು ಹಾಕಿರುವ ಐಷಾರಾಮಿ ಹಡಗಿನಿಂದ 192 ಭಾರತೀಯರನ್ನು ಸರ್ಕಾರವು ದೇಶಕ್ಕೆ ಕರೆ ತಂದಿದೆ. ಇದೇ 5ರಿಂದಲೇ ಐಷಾರಾಮಿ ಹಡಗನ್ನು ಜಪಾನ್ ಕಡಲ ತೀರದಲ್ಲಿಯೇ ನಿಲ್ಲಿಸಲಾಗಿದೆ. ಈ ಹಡಗಿನಲ್ಲಿ ಇದ್ದ ಹಲವು ಮಂದಿಗೆ ಸೋಂಕು ತಗಲಿತ್ತು.</p>.<p>ಕೊರೊನಾ ವೈರಸ್ ಪಿಡುಗು ಆರಂಭವಾದ ಚೀನಾದ ಹುಬೆ ಪ್ರಾಂತ್ಯ<br />ದಲ್ಲಿದ್ದ 73 ಭಾರತೀಯರನ್ನು ಸಿ–17 ಸೇನಾ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ವಾಯುಪಡೆಯ ಈ ವಿಮಾನವು ವುಹಾನ್ನಿಂದ ದೆಹಲಿಗೆ ಗುರುವಾರ ಬಂದಿದೆ. ಬೀಜಿಂಗ್ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೂವರು ಅಧಿಕಾರಿಗಳೂ ವಿಮಾನದಲ್ಲಿ ಬಂದಿದ್ದಾರೆ. ಭಾರತೀಯರ ತೆರವು ಕಾರ್ಯಾಚರಣೆಯ ಉಸ್ತುವಾರಿಗಾಗಿ ಈ ಅಧಿಕಾರಿಗಳು ಬೀಜಿಂಗ್ನಿಂದ ವುಹಾನ್ಗೆ ಹೋಗಿದ್ದರು.</p>.<p>ವುಹಾನ್ನಲ್ಲಿದ್ದ ಇತರ ದೇಶಗಳ ಕೆಲವರನ್ನೂ ವಿಮಾನದಲ್ಲಿ ಕರೆತರಲಾಗಿದೆ. ಬಾಂಗ್ಲಾದೇಶದ 23, ಚೀನಾದ ಆರು, ಮ್ಯಾನ್ಮಾರ್ ಮತ್ತು ಮಾಲ್ಡೀವ್ಸ್ನ ತಲಾ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ, ಅಮೆರಿಕ, ಮಡಗಾಸ್ಕರ್ನ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.</p>.<p>ಭಾರತದ ವಿಮಾನದಲ್ಲಿ ಬಂದ ಆರು ಚೀನೀಯರು, ತೆರವು ಮಾಡಲಾದ ವ್ಯಕ್ತಿಗಳ ಗಂಡ/ಹೆಂಡತಿ ಅಥವಾ ಮಕ್ಕಳು ಎಂದು ಮೂಲಗಳು ಹೇಳಿವೆ.</p>.<p>ಜಪಾನ್ನಿಂದ ಬಂದ ಇನ್ನೊಂದು ವಿಮಾನ ಕೂಡ ಗುರುವಾರವೇ ದೆಹಲಿಗೆ ಬಂತು. ಜಪಾನ್ನ ಯೊಕೊಹಾಮಾದಲ್ಲಿ ಲಂಗರು ಹಾಕಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇದ್ದ 119 ಭಾರತೀಯರನ್ನು ಈ ವಿಮಾನವು ಕರೆ ತಂದಿದೆ.<br />ಇವರಲ್ಲಿ 113 ಮಂದಿ ಹಡಗಿನ ಸಿಬ್ಬಂದಿಯಾಗಿದ್ದರೆ, ಉಳಿದವರು ಪ್ರಯಾಣಿಕರಾಗಿದ್ದರು. ಶ್ರೀಲಂಕಾದ ಇಬ್ಬರು, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ ತಲಾ ಒಬ್ಬರನ್ನು ಕೂಡ ಏರ್ ಇಂಡಿಯಾ ವಿಮಾನದಲ್ಲಿ ಕರೆತರಲಾಗಿದೆ.</p>.<p>ಈ ಹಡಗಿನಲ್ಲಿ ಭಾರತದ 138 ಮಂದಿ ಇದ್ದರು. ಅವರಲ್ಲಿ 16 ಮಂದಿಯಲ್ಲಿ (ಈ ಎಲ್ಲರೂ ಹಡಗಿನ ಸಿಬ್ಬಂದಿ) ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರಿಗೆ ಜಪಾನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಎಲ್ಲರ ಜತೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.</p>.<p>ಇದಕ್ಕೂ ಮೊದಲು, 647 ಭಾರತೀಯರನ್ನು ಚೀನಾದಿಂದ ಕರೆತರಲಾಗಿತ್ತು</p>.<p>ಭಾರತವು ಚೀನಾಕ್ಕೆ 15 ಟನ್ಗಳಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿದೆ</p>.<p><strong>14 ದಿನ ಪ್ರತ್ಯೇಕ ವಾಸ</strong></p>.<p>ದೆಹಲಿಗೆ ಬಂದಿರುವ ಎಲ್ಲರನ್ನೂ ಮುಂದಿನ 14 ದಿನ ಪ್ರತ್ಯೇಕವಾಗಿ ಇರಿಸಲಾಗುವುದು. ಇಂಡೊ–ಟಿಬೆಟನ್ ಗಡಿ ಪೊಲೀಸ್ ಪಡೆಯು ದೆಹಲಿಯ ಛಾವ್ಲಾದಲ್ಲಿ ರೂಪಿಸಿರುವ ಕೇಂದ್ರದಲ್ಲಿ ಚೀನಾದಿಂದ ಬಂದವರನ್ನು ಇರಿಸಲಾಗುವುದು. ಭಾರತೀಯ ಸೇನೆಯು ಹರಿಯಾಣದ ಮನೇಸರ್ನಲ್ಲಿ ನಿರ್ಮಿಸಿರುವ ಪ್ರತ್ಯೇಕ ಕೇಂದ್ರದಲ್ಲಿ ಜಪಾನ್ನಿಂದ ಬಂದವರನ್ನು ಇರಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>