<p><strong>ನವದೆಹಲಿ</strong>: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಅಮೆರಿಕದ ‘ ಬಿಗಿ ಹಿಡಿತ’ಕ್ಕೆ ಸಿಲುಕಿ ಪ್ರಧಾನಿ ನರೇಂದ್ರ ಮೋದಿ ಅವರು ‘ದೈನ್ಯ ಸ್ಥಿತಿ’ಯಲ್ಲಿ ಶರಣಾಗಿದ್ದಾರೆ. ಹೀಗಾಗಿ ಅಮೆರಿಕಕ್ಕೆ ಹೆಚ್ಚಿನದನ್ನು ನೀಡಿ, ಭಾರತ ಕಡಿಮೆ ಪಡೆದುಕೊಳ್ಳುವ ಒಪ್ಪಂದಕ್ಕೆ ಅವರು ಸಹಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>ಒಪ್ಪಂದದಿಂದಾಗಿ ಭಾರತವು ‘ಡೇಟಾ ಕಾಲೊನಿ’ ಆಗಲಿದೆ ಎಂದೂ ಟೀಕಿಸಿದ್ದಾರೆ. </p>.<p>ಒಪ್ಪಂದದ ಮೂಲಕ ದೇಶವನ್ನೇ ಮಾರಾಟ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ‘ಎಕ್ಸ್’ನಲ್ಲಿ ಕಿಡಿಕಾರಿದ್ದಾರೆ. ಇದರೊಂದಿಗೆ ಸಂಸತ್ತಿನಲ್ಲಿ ತಾವು ಇತ್ತೀಚೆಗೆ ಮಾತನಾಡಿದ್ದ ವಿಡಿಯೊವನ್ನೂ ಲಗತ್ತಿಸಿದ್ದಾರೆ.</p>.<p>‘ಅಮೆರಿಕನ್ನರ ಓಲೈಕೆಗಾಗಿ ನಮ್ಮ ರೈತರೇಕೆ ತ್ಯಾಗ ಮಾಡಬೇಕು? ತೈಲ ಪೂರೈಕೆಯನ್ನು ಅಮೆರಿಕದ ನಿಯಂತ್ರಣಕ್ಕೆ ನೀಡಿ, ಭಾರತದ ಇಂಧನ ಭದ್ರತೆಯೊಂದಿಗೆ ಏಕೆ ರಾಜಿಯಾಗಬೇಕು ಮತ್ತು ಪ್ರಧಾನಿ ಏಕೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ– ಈ ಎಲ್ಲಕ್ಕೂ ಉತ್ತರವೆಂದರೆ, ಮೋದಿ ಅಮೆರಿಕಕ್ಕೆ ಶರಣಾಗಿರುವುದು’ ಎಂದು ಹೇಳಿದ್ದಾರೆ.</p>.<p>‘ರಾಜಕೀಯ ‘ಬಿಗಿ ಹಿಡಿತ’ವು ಗುಟ್ಟಾಗಿರುತ್ತದೆ. ಸಾಮಾನ್ಯ ಜನರ ಕಣ್ಣಿಗೆ ಕಾಣುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರಷ್ಟೇ ಕಾಣುತ್ತದೆ’ ಎಂದಿದ್ದಾರೆ.</p>.<p>‘ಒಂದೆಡೆ ಅಮೆರಿಕದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ, ಇನ್ನೊಂದೆಡೆ ಎಪ್ಸ್ಟೈನ್ ಹಗರಣ, ಮತ್ತೊಂದೆಡೆ ಚೀನಾ (ನರವಣೆ ಅವರ ಅಪ್ರಕಟಿತ ‘ಆತ್ಮಚರಿತ್ರೆ’) ಇವೆಲ್ಲವೂ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದಿದ್ದಾರೆ.</p>.<p><strong>‘ರಾಜಕೀಯ ದುರುದ್ದೇಶದಿಂದ ಮಾನನಷ್ಟ ಮೊಕದ್ದಮೆ’</strong></p><p> ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಹೇಳಿಕೆಗಾಗಿ ಸಂಬಂಧಿಸಿದಂತೆ 2018ರಲ್ಲಿ ದಾಖಲಾದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಸುಲ್ತಾನ್ಪುರದ ಜನಪ್ರತಿನಿಧಿಗಳ (ಸಂಸದರು–ಶಾಸಕರ) ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.</p><p>‘ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸ<br>ಲಾಗಿದ್ದು, ಪಕ್ಷ ಹಾಗೂ ನನ್ನ ವರ್ಚಸ್ಸನ್ನು ಹಾಳುಮಾಡುವ ಗುರಿ ಹೊಂದಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಶುಭಾಂ ವರ್ಮಾ ಮುಂದೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ’ ಎಂದು ಅವರ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಹೇಳಿಕೆ ನೀಡಿದ್ದಾರೆ.</p><p>ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಾಕ್ಷ್ಯ ಸಲ್ಲಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಮಾರ್ಚ್ 9ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.</p><p>‘ನನ್ನ ಮೇಲಿನ ಆರೋಪವು ಆಧಾರರಹಿತವಾಗಿದೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿಲ್ಲ. ಯಾರನ್ನಾದರೂ ದೂಷಿಸುವ ಉದ್ದೇಶದಿಂದ ಅಂತಹ ಭಾಷೆ ಬಳಸಿದ್ದೇನೆಯೇ? ನನ್ನ ಹೇಳಿಕೆಯನ್ನು ತಿರುಚಿ, ಸುಳ್ಳು ದೂರು ದಾಖಲಿಸಲಾಗಿದೆ ಎಂದು<br>ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದಾರೆ’ ಎಂದು ವಕೀಲ ಶುಕ್ಲಾ ವಿವರಿಸಿದ್ದಾರೆ.</p><p>ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹೇಳಿಕೆ ದಾಖಲಿಸಲು ಬಂದ ವೇಳೆ ಅವರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.</p><p>ನೆರೆದಿದ್ದ ಕಾರ್ಯಕರ್ತರತ್ತ ನಗೆಬೀರಿ ಅಲ್ಲಿಂದ ತೆರಳಿದರು.</p><p>ನ್ಯಾಯಾಲಯದ ವಿಚಾರಣೆಗೂ ಮುನ್ನ ಸ್ಥಳೀಯ ಕಾಂಗ್ರೆಸ್ ನಾಯಕರು ಸುಲ್ತಾನ್ಪುರದ ವೃತ್ತಗಳಲ್ಲಿ ‘ಸತ್ಯಮೇವ ಜಯತೇ’ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಅಮೆರಿಕದ ‘ ಬಿಗಿ ಹಿಡಿತ’ಕ್ಕೆ ಸಿಲುಕಿ ಪ್ರಧಾನಿ ನರೇಂದ್ರ ಮೋದಿ ಅವರು ‘ದೈನ್ಯ ಸ್ಥಿತಿ’ಯಲ್ಲಿ ಶರಣಾಗಿದ್ದಾರೆ. ಹೀಗಾಗಿ ಅಮೆರಿಕಕ್ಕೆ ಹೆಚ್ಚಿನದನ್ನು ನೀಡಿ, ಭಾರತ ಕಡಿಮೆ ಪಡೆದುಕೊಳ್ಳುವ ಒಪ್ಪಂದಕ್ಕೆ ಅವರು ಸಹಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>ಒಪ್ಪಂದದಿಂದಾಗಿ ಭಾರತವು ‘ಡೇಟಾ ಕಾಲೊನಿ’ ಆಗಲಿದೆ ಎಂದೂ ಟೀಕಿಸಿದ್ದಾರೆ. </p>.<p>ಒಪ್ಪಂದದ ಮೂಲಕ ದೇಶವನ್ನೇ ಮಾರಾಟ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ‘ಎಕ್ಸ್’ನಲ್ಲಿ ಕಿಡಿಕಾರಿದ್ದಾರೆ. ಇದರೊಂದಿಗೆ ಸಂಸತ್ತಿನಲ್ಲಿ ತಾವು ಇತ್ತೀಚೆಗೆ ಮಾತನಾಡಿದ್ದ ವಿಡಿಯೊವನ್ನೂ ಲಗತ್ತಿಸಿದ್ದಾರೆ.</p>.<p>‘ಅಮೆರಿಕನ್ನರ ಓಲೈಕೆಗಾಗಿ ನಮ್ಮ ರೈತರೇಕೆ ತ್ಯಾಗ ಮಾಡಬೇಕು? ತೈಲ ಪೂರೈಕೆಯನ್ನು ಅಮೆರಿಕದ ನಿಯಂತ್ರಣಕ್ಕೆ ನೀಡಿ, ಭಾರತದ ಇಂಧನ ಭದ್ರತೆಯೊಂದಿಗೆ ಏಕೆ ರಾಜಿಯಾಗಬೇಕು ಮತ್ತು ಪ್ರಧಾನಿ ಏಕೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ– ಈ ಎಲ್ಲಕ್ಕೂ ಉತ್ತರವೆಂದರೆ, ಮೋದಿ ಅಮೆರಿಕಕ್ಕೆ ಶರಣಾಗಿರುವುದು’ ಎಂದು ಹೇಳಿದ್ದಾರೆ.</p>.<p>‘ರಾಜಕೀಯ ‘ಬಿಗಿ ಹಿಡಿತ’ವು ಗುಟ್ಟಾಗಿರುತ್ತದೆ. ಸಾಮಾನ್ಯ ಜನರ ಕಣ್ಣಿಗೆ ಕಾಣುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರಷ್ಟೇ ಕಾಣುತ್ತದೆ’ ಎಂದಿದ್ದಾರೆ.</p>.<p>‘ಒಂದೆಡೆ ಅಮೆರಿಕದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ, ಇನ್ನೊಂದೆಡೆ ಎಪ್ಸ್ಟೈನ್ ಹಗರಣ, ಮತ್ತೊಂದೆಡೆ ಚೀನಾ (ನರವಣೆ ಅವರ ಅಪ್ರಕಟಿತ ‘ಆತ್ಮಚರಿತ್ರೆ’) ಇವೆಲ್ಲವೂ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದಿದ್ದಾರೆ.</p>.<p><strong>‘ರಾಜಕೀಯ ದುರುದ್ದೇಶದಿಂದ ಮಾನನಷ್ಟ ಮೊಕದ್ದಮೆ’</strong></p><p> ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಹೇಳಿಕೆಗಾಗಿ ಸಂಬಂಧಿಸಿದಂತೆ 2018ರಲ್ಲಿ ದಾಖಲಾದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಸುಲ್ತಾನ್ಪುರದ ಜನಪ್ರತಿನಿಧಿಗಳ (ಸಂಸದರು–ಶಾಸಕರ) ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.</p><p>‘ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸ<br>ಲಾಗಿದ್ದು, ಪಕ್ಷ ಹಾಗೂ ನನ್ನ ವರ್ಚಸ್ಸನ್ನು ಹಾಳುಮಾಡುವ ಗುರಿ ಹೊಂದಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಶುಭಾಂ ವರ್ಮಾ ಮುಂದೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ’ ಎಂದು ಅವರ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಹೇಳಿಕೆ ನೀಡಿದ್ದಾರೆ.</p><p>ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಾಕ್ಷ್ಯ ಸಲ್ಲಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಮಾರ್ಚ್ 9ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.</p><p>‘ನನ್ನ ಮೇಲಿನ ಆರೋಪವು ಆಧಾರರಹಿತವಾಗಿದೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿಲ್ಲ. ಯಾರನ್ನಾದರೂ ದೂಷಿಸುವ ಉದ್ದೇಶದಿಂದ ಅಂತಹ ಭಾಷೆ ಬಳಸಿದ್ದೇನೆಯೇ? ನನ್ನ ಹೇಳಿಕೆಯನ್ನು ತಿರುಚಿ, ಸುಳ್ಳು ದೂರು ದಾಖಲಿಸಲಾಗಿದೆ ಎಂದು<br>ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದಾರೆ’ ಎಂದು ವಕೀಲ ಶುಕ್ಲಾ ವಿವರಿಸಿದ್ದಾರೆ.</p><p>ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹೇಳಿಕೆ ದಾಖಲಿಸಲು ಬಂದ ವೇಳೆ ಅವರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.</p><p>ನೆರೆದಿದ್ದ ಕಾರ್ಯಕರ್ತರತ್ತ ನಗೆಬೀರಿ ಅಲ್ಲಿಂದ ತೆರಳಿದರು.</p><p>ನ್ಯಾಯಾಲಯದ ವಿಚಾರಣೆಗೂ ಮುನ್ನ ಸ್ಥಳೀಯ ಕಾಂಗ್ರೆಸ್ ನಾಯಕರು ಸುಲ್ತಾನ್ಪುರದ ವೃತ್ತಗಳಲ್ಲಿ ‘ಸತ್ಯಮೇವ ಜಯತೇ’ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>