<p class="title"><strong>ಜಮ್ಮು : </strong>ಹಿಮಪಾತದಿಂದ ಆವೃತವಾಗಿರುವ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾಡಾ ಜಿಲ್ಲೆಯ ಕುಗ್ರಾಮ ನವಾಪಾಚಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ಭೂ ಹಾಗೂ ವಾಯುಸೇನೆಯ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.</p>.<p>‘ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ಇದರಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಥ ಸಂದರ್ಭದಲ್ಲಿ ಗ್ರಾಮದಿಂದ ಸೇನೆಗೆ ಕರೆ ಬರುತ್ತದೆ. ಈ ವೇಳೆ ಎಂಐ ಹೆಲಿಕಾಪ್ಟರ್ ಮೂಲಕ ವಾಯುಸೇನೆಯ ತಂಡವೊಂದು ಹಿಮಾವೃತ ನವಾಪಾಚಿ ಗ್ರಾಮಕ್ಕೆ ಹೋಗಿ, ಗರ್ಭಿಣಿಯನ್ನು ಕಿಶ್ತ್ವಾಡಾ ನಗರಕ್ಕೆ ಕರೆತಂದಿತು’ ಎಂದು ಸೇನಾ ವಕ್ತಾರ ಲೆ.ಕರ್ನಲ್ ದೇವೇಂದ್ರ ಆನಂದ್ ಅವರು ಮಾಹಿತಿ ನೀಡಿದರು.</p>.<p>ನವಾಪಾಚಿ ಗ್ರಾಮಸ್ಥರು ಭೂ ಹಾಗೂ ವಾಯುಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸೇನೆಯ ಕುರಿತು ಜಯಘೋಷಗಳನ್ನು ಕೂಗಿದ್ದಾರೆ. ‘ಭಯೋತ್ಪಾದನೆ ನಿಗ್ರಹ ಕಾರ್ಯಚರಣೆಯಲ್ಲಿ ಮಾತ್ರ ಸೇನೆ ತೊಡಗುವುದಿಲ್ಲ. ಜನರ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತದೆ’ ಎಂದು ಲೆ.ಕರ್ನಲ್ ದೇವೇಂದ್ರ ಆನಂದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಜಮ್ಮು : </strong>ಹಿಮಪಾತದಿಂದ ಆವೃತವಾಗಿರುವ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾಡಾ ಜಿಲ್ಲೆಯ ಕುಗ್ರಾಮ ನವಾಪಾಚಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ಭೂ ಹಾಗೂ ವಾಯುಸೇನೆಯ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.</p>.<p>‘ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ಇದರಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಥ ಸಂದರ್ಭದಲ್ಲಿ ಗ್ರಾಮದಿಂದ ಸೇನೆಗೆ ಕರೆ ಬರುತ್ತದೆ. ಈ ವೇಳೆ ಎಂಐ ಹೆಲಿಕಾಪ್ಟರ್ ಮೂಲಕ ವಾಯುಸೇನೆಯ ತಂಡವೊಂದು ಹಿಮಾವೃತ ನವಾಪಾಚಿ ಗ್ರಾಮಕ್ಕೆ ಹೋಗಿ, ಗರ್ಭಿಣಿಯನ್ನು ಕಿಶ್ತ್ವಾಡಾ ನಗರಕ್ಕೆ ಕರೆತಂದಿತು’ ಎಂದು ಸೇನಾ ವಕ್ತಾರ ಲೆ.ಕರ್ನಲ್ ದೇವೇಂದ್ರ ಆನಂದ್ ಅವರು ಮಾಹಿತಿ ನೀಡಿದರು.</p>.<p>ನವಾಪಾಚಿ ಗ್ರಾಮಸ್ಥರು ಭೂ ಹಾಗೂ ವಾಯುಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸೇನೆಯ ಕುರಿತು ಜಯಘೋಷಗಳನ್ನು ಕೂಗಿದ್ದಾರೆ. ‘ಭಯೋತ್ಪಾದನೆ ನಿಗ್ರಹ ಕಾರ್ಯಚರಣೆಯಲ್ಲಿ ಮಾತ್ರ ಸೇನೆ ತೊಡಗುವುದಿಲ್ಲ. ಜನರ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತದೆ’ ಎಂದು ಲೆ.ಕರ್ನಲ್ ದೇವೇಂದ್ರ ಆನಂದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>