ಡೆಹ್ರಾಡೂನ್ (ಪಿಟಿಐ): ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿದ್ದ ಡೆಹ್ರಾಡೂನ್ನ ಸೇನಾ ಯೋಧ 13 ದಿನಗಳಿಂದ ನಾಪತ್ತೆಯಾಗಿದ್ದು, ಅವರ ಕುಟುಂಬ ಸದಸ್ಯರಲ್ಲಿ ಆತಂಕ ಮೂಡಿಸಿದೆ.
ಥಕ್ಲಾ ಪೋಸ್ಟ್ ಬಳಿ ನಿಯೋಜನೆಗೊಂಡಿದ್ದ7ನೇ ಗರವಾಲ್ ರೈಫಲ್ಸ್ ಪಡೆಯ ಯೋಧ ಪ್ರಕಾಶ್ ಸಿಂಗ್ ರಾಣಾ ಮೇ 29ರಿಂದ ನಾಪತ್ತೆಯಾಗಿರುವ ಬಗ್ಗೆ ಆತನ ಪತ್ನಿಗೆ ಸೇನಾ ಅಧಿಕಾರಿಗಳು ದೂರವಾಣಿ ಮೂಲಕ ತಿಳಿಸಿದ್ದಾರೆ.
ಸಹಸ್ಪುರದ ಬಿಜೆಪಿ ಶಾಸಕ ಸಹದೇವ್ ಸಿಂಗ್ ಪುಂಡೀರ್ ಅವರು ಯೋಧನ ನಿವಾಸಕ್ಕೆ ಭೇಟಿ ನೀಡಿ, ಧೈರ್ಯ ಹೇಳಿದರು.