<p><strong>ನವದೆಹಲಿ</strong>: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತ ರುದ್ರೇಶ್ ಅವರ ಹತ್ಯೆಯ ಪ್ರಮುಖ ಸಂಚುಕೋರ ಎನ್ನಲಾದ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತ ಘೌಸ್ ನಯಾಜಿ ಎನ್ನುವವನನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಿದ್ದಾರೆ.</p>.<p>ನಯಾಜಿ ತಾಂಜಾನಿಯಾದಲ್ಲಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂಜಾನಿಯಾದಿಂದ ಮುಂಬೈಗೆ ಬಂದ ನಯಾಜಿಯನ್ನು ಬಂಧಿಸಲಾಯಿತು. ಗುಪ್ತಚರ ಮಾಹಿತಿ ಆಧರಿಸಿ ನಯಾಜಿ ತಾಂಜಾನಿಯಾದಲ್ಲಿ ಇರುವುದನ್ನು ಪತ್ತೆ ಮಾಡಲಾಗಿತ್ತು. ಅಲ್ಲಿನ ಅಧಿಕಾರಿಗಳು ಆತನನ್ನು ಹಿಡಿದು, ಭಾರತಕ್ಕೆ ಕಳುಹಿಸಿದ್ದರು.</p>.<p>ಬೆಂಗಳೂರಿನ ಶಿವಾಜಿನಗರದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು 2016ರ ಅಕ್ಟೋಬರ್ 16ರಂದು ಹತ್ಯೆ ಮಾಡಲಾಗಿತ್ತು. ಪಿಎಫ್ಐನ ನಾಲ್ವರು ಕಾರ್ಯಕರ್ತರು ಅವರ ಹತ್ಯೆ ಮಾಡಿದ್ದರು. ಹತ್ಯೆಯ ಪ್ರಮುಖ ಸಂಚುಕೋರ ಎಂಬ ಆರೋಪ ನಯಾಜಿ ಮೇಲಿದೆ.</p>.<p>ಎಸ್ಡಿಪಿಐ ಪಕ್ಷದ ಹೆಬ್ಬಾಳ ವಿಧಾಸನಭಾ ಕ್ಷೇತ್ರದ ಅಧ್ಯಕ್ಷ ಆಗಿದ್ದ ನಯಾಜಿ, ಆಸಿಂ ಶರೀಫ್ ಎನ್ನುವ ವ್ಯಕ್ತಿಯೊಬ್ಬನ ಜೊತೆಗೂಡಿ ರುದ್ರೇಶ್ ಕೊಲೆಗೆ ಸಂಚು ರೂಪಿಸಿದ್ದ ಎಂಬ ಆರೋಪ ಇದೆ ಎಂದು ಹೇಳಿಕೆ ತಿಳಿಸಿದೆ. ಪಿಎಫ್ಐ ಸಂಘಟನೆಯ ರಾಜಕೀಯ ವಿಭಾಗ ಎಸ್ಡಿಪಿಐ.</p>.<p>‘ಆರ್ಎಸ್ಎಸ್ ಸದಸ್ಯರು ಹಾಗೂ ಇಡೀ ಸಮಾಜದಲ್ಲಿ ಭೀತಿಯನ್ನು ಸೃಷ್ಟಿಸಲು ನಯಾಜಿ ಮತ್ತು ಶರೀಫ್ ಜೊತೆಗೂಡಿ, ಇತರ ನಾಲ್ವರಿಗೆ ರುದ್ರೇಶ್ ಅವರನ್ನು ಹತ್ಯೆ ಮಾಡಲು ಪ್ರೇರಣೆ ನೀಡಿದ್ದರು. ಆರ್ಎಸ್ಎಸ್ ವಿರುದ್ಧದ ಸಮರವು ಪವಿತ್ರ ಯುದ್ಧಕ್ಕೆ ಸಮ ಎಂದು ಆ ನಾಲ್ವರ ಮನವೊಲಿಸಲಾಗಿತ್ತು’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.</p>.<p>ನಯಾಜಿ ಬಂಧನದ ಪರಿಣಾಮವಾಗಿ ರುದ್ರೇಶ್ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದಂತಾಗಿದೆ. ಇತರ ಆರೋಪಿಗಳ ವಿರುದ್ಧದ ವಿಚಾರಣೆಯು ಬೆಂಗಳೂರಿನಲ್ಲಿ ಇರುವ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.</p>.<p>ಎನ್ಐಎ 2017ರ ಏಪ್ರಿಲ್ 12ರಂದು ಸಲ್ಲಿಸಿದ್ದ ಆರೋಪಪಟ್ಟಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಇರ್ಫಾನ್ ಪಾಶಾ, ವಸೀಂ ಅಹಮದ್, ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜೀಬ್ ಉಲ್ಲಾ ಮತ್ತು ಅಸೀಂ ಶರೀಫ್ ಬಂಧಿತರು.</p>.<p><span style="font-size:large;">‘ಆರೋಪಿಗಳಲ್ಲಿ ಯಾರೊಬ್ಬರಿಗೂ ರುದ್ರೇಶ್ ಬಗ್ಗೆ ವೈಯಕ್ತಿಕವಾಗಿ ದ್ವೇಷ ಇರಲಿಲ್ಲ. ರುದ್ರೇಶ್ ಅವರು ನಿರ್ದಿಷ್ಟ ಸಂಘಟನೆಯ ನಾಯಕ/ಕಾರ್ಯಕರ್ತ ಆಗಿದ್ದ ಕಾರಣಕ್ಕಾಗಿಯೇ ಹತ್ಯೆ ಮಾಡಲಾಯಿತು. ಜನರಲ್ಲಿನ ಒಂದು ವರ್ಗದಲ್ಲಿ ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿರುವ ಹತ್ಯೆಯು ಭಯೋತ್ಪಾದಕ ಕೃತ್ಯ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಆರ್ಎಸ್ಎಸ್ನ ಸದಸ್ಯರೊಬ್ಬರನ್ನು ಹಾಡಹಗಲೇ, ಮಾರಣಾಂತಿಕ ಅಸ್ತ್ರಗಳನ್ನು ಬಳಸಿ ಹತ್ಯೆ ಮಾಡುವ ಮೂಲಕ ಈ ಉದ್ದೇಶ ಈಡೇರಿಸಲಾಗಿದೆ’ ಎಂದು ಎನ್ಐಎ 2017ರ ಏಪ್ರಿಲ್ನಲ್ಲಿ ಹೇಳಿದೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತ ರುದ್ರೇಶ್ ಅವರ ಹತ್ಯೆಯ ಪ್ರಮುಖ ಸಂಚುಕೋರ ಎನ್ನಲಾದ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತ ಘೌಸ್ ನಯಾಜಿ ಎನ್ನುವವನನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಿದ್ದಾರೆ.</p>.<p>ನಯಾಜಿ ತಾಂಜಾನಿಯಾದಲ್ಲಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂಜಾನಿಯಾದಿಂದ ಮುಂಬೈಗೆ ಬಂದ ನಯಾಜಿಯನ್ನು ಬಂಧಿಸಲಾಯಿತು. ಗುಪ್ತಚರ ಮಾಹಿತಿ ಆಧರಿಸಿ ನಯಾಜಿ ತಾಂಜಾನಿಯಾದಲ್ಲಿ ಇರುವುದನ್ನು ಪತ್ತೆ ಮಾಡಲಾಗಿತ್ತು. ಅಲ್ಲಿನ ಅಧಿಕಾರಿಗಳು ಆತನನ್ನು ಹಿಡಿದು, ಭಾರತಕ್ಕೆ ಕಳುಹಿಸಿದ್ದರು.</p>.<p>ಬೆಂಗಳೂರಿನ ಶಿವಾಜಿನಗರದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು 2016ರ ಅಕ್ಟೋಬರ್ 16ರಂದು ಹತ್ಯೆ ಮಾಡಲಾಗಿತ್ತು. ಪಿಎಫ್ಐನ ನಾಲ್ವರು ಕಾರ್ಯಕರ್ತರು ಅವರ ಹತ್ಯೆ ಮಾಡಿದ್ದರು. ಹತ್ಯೆಯ ಪ್ರಮುಖ ಸಂಚುಕೋರ ಎಂಬ ಆರೋಪ ನಯಾಜಿ ಮೇಲಿದೆ.</p>.<p>ಎಸ್ಡಿಪಿಐ ಪಕ್ಷದ ಹೆಬ್ಬಾಳ ವಿಧಾಸನಭಾ ಕ್ಷೇತ್ರದ ಅಧ್ಯಕ್ಷ ಆಗಿದ್ದ ನಯಾಜಿ, ಆಸಿಂ ಶರೀಫ್ ಎನ್ನುವ ವ್ಯಕ್ತಿಯೊಬ್ಬನ ಜೊತೆಗೂಡಿ ರುದ್ರೇಶ್ ಕೊಲೆಗೆ ಸಂಚು ರೂಪಿಸಿದ್ದ ಎಂಬ ಆರೋಪ ಇದೆ ಎಂದು ಹೇಳಿಕೆ ತಿಳಿಸಿದೆ. ಪಿಎಫ್ಐ ಸಂಘಟನೆಯ ರಾಜಕೀಯ ವಿಭಾಗ ಎಸ್ಡಿಪಿಐ.</p>.<p>‘ಆರ್ಎಸ್ಎಸ್ ಸದಸ್ಯರು ಹಾಗೂ ಇಡೀ ಸಮಾಜದಲ್ಲಿ ಭೀತಿಯನ್ನು ಸೃಷ್ಟಿಸಲು ನಯಾಜಿ ಮತ್ತು ಶರೀಫ್ ಜೊತೆಗೂಡಿ, ಇತರ ನಾಲ್ವರಿಗೆ ರುದ್ರೇಶ್ ಅವರನ್ನು ಹತ್ಯೆ ಮಾಡಲು ಪ್ರೇರಣೆ ನೀಡಿದ್ದರು. ಆರ್ಎಸ್ಎಸ್ ವಿರುದ್ಧದ ಸಮರವು ಪವಿತ್ರ ಯುದ್ಧಕ್ಕೆ ಸಮ ಎಂದು ಆ ನಾಲ್ವರ ಮನವೊಲಿಸಲಾಗಿತ್ತು’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.</p>.<p>ನಯಾಜಿ ಬಂಧನದ ಪರಿಣಾಮವಾಗಿ ರುದ್ರೇಶ್ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದಂತಾಗಿದೆ. ಇತರ ಆರೋಪಿಗಳ ವಿರುದ್ಧದ ವಿಚಾರಣೆಯು ಬೆಂಗಳೂರಿನಲ್ಲಿ ಇರುವ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.</p>.<p>ಎನ್ಐಎ 2017ರ ಏಪ್ರಿಲ್ 12ರಂದು ಸಲ್ಲಿಸಿದ್ದ ಆರೋಪಪಟ್ಟಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಇರ್ಫಾನ್ ಪಾಶಾ, ವಸೀಂ ಅಹಮದ್, ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜೀಬ್ ಉಲ್ಲಾ ಮತ್ತು ಅಸೀಂ ಶರೀಫ್ ಬಂಧಿತರು.</p>.<p><span style="font-size:large;">‘ಆರೋಪಿಗಳಲ್ಲಿ ಯಾರೊಬ್ಬರಿಗೂ ರುದ್ರೇಶ್ ಬಗ್ಗೆ ವೈಯಕ್ತಿಕವಾಗಿ ದ್ವೇಷ ಇರಲಿಲ್ಲ. ರುದ್ರೇಶ್ ಅವರು ನಿರ್ದಿಷ್ಟ ಸಂಘಟನೆಯ ನಾಯಕ/ಕಾರ್ಯಕರ್ತ ಆಗಿದ್ದ ಕಾರಣಕ್ಕಾಗಿಯೇ ಹತ್ಯೆ ಮಾಡಲಾಯಿತು. ಜನರಲ್ಲಿನ ಒಂದು ವರ್ಗದಲ್ಲಿ ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿರುವ ಹತ್ಯೆಯು ಭಯೋತ್ಪಾದಕ ಕೃತ್ಯ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಆರ್ಎಸ್ಎಸ್ನ ಸದಸ್ಯರೊಬ್ಬರನ್ನು ಹಾಡಹಗಲೇ, ಮಾರಣಾಂತಿಕ ಅಸ್ತ್ರಗಳನ್ನು ಬಳಸಿ ಹತ್ಯೆ ಮಾಡುವ ಮೂಲಕ ಈ ಉದ್ದೇಶ ಈಡೇರಿಸಲಾಗಿದೆ’ ಎಂದು ಎನ್ಐಎ 2017ರ ಏಪ್ರಿಲ್ನಲ್ಲಿ ಹೇಳಿದೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>