ಗ್ರಾಮಕ್ಕೆ ರಾಜ್ಯ ಸರ್ಕಾರದಿಂದ ನೇರವಾಗಿ ₹ 10 ಲಕ್ಷ ಅನುದಾನ ಕೊಡುವುದರಿಂದ ಕಮಿಷನ್ ದಂಧೆಗೆ ತಡೆ ಬೀಳುತ್ತದೆ. ಗ್ರಾಮದ ಅಭಿವೃದ್ಧಿಗೆ ಸರಪಂಚ ಶಾಸಕ ಅಥವಾ ಜಿಲ್ಲಾ ಅಧಿಕಾರಿಗಳ ಮುಂದೆ ಕೈಚಾಚಿ ಕೂರಬೇಕು ಎಂದಿಲ್ಲ ಎಂದರು.
ಸುರೇಂದ್ರನಗರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್, ಎಎಪಿ ಅಧಿಕಾರಕ್ಕೆ ಬಂದರೆ 2023 ಫೆಬ್ರವರಿ 28ರ ಒಳಗೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಪೂರೈಸುವುದಾಗಿ ಹೇಳಿದರು.