ಕಾಂಗ್ರೆಸ್ ಹಿರಿಯ ನಾಯಕ ಮತ್ತು ನಟ ರಾಜ್ ಬಬ್ಬರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಆರ್ಯನ್ ಖಾನ್ ಪ್ರಕರಣದಲ್ಲಿ ಸಾಕ್ಷಿಗಳು ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿತು.ಆ ವೇಳೆ ನಾನು, ಹಡಗಿನ ಪ್ರಕರಣ ಸೇರಿ ಸಿನಿಮಾ ಮಂದಿಯ ಮಾನಹಾನಿ ಮಾಡಲು ಪ್ರಸಾರ ಮಾಡಿದ್ದ ಸುದ್ದಿಗಳು ಮತ್ತು ವಿಡಿಯೊಗಳನ್ನು ಪುನಃ ನೋಡಿದೆ. ಅವುಗಳಲ್ಲಿ ವೃತ್ತಿಜೀವನಕ್ಕೆ ಪೆಟ್ಟು, ಮುಖದಲ್ಲಿ ಬೇಸರದ ಛಾಯೆ, ಶಾರುಕ್ ಖಾನ್ರ ಮೌನ ಇತ್ತು. ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಬಬ್ಬರ್ ಹೇಳಿದ್ದಾರೆ.