<p><strong>ಸಿಲ್ಚರ್:</strong> ಅಸ್ಸಾಂನ ಖಚ್ಚರ್ ಜಿಲ್ಲೆಯಲ್ಲಿ ನವೀಕರಣಗೊಂಡ ಸೇತುವೆಯೊಂದು ಕುಸಿದು ಓವರ್ಲೋಡ್ ಆಗಿದ್ದ ಎರಡು ಲಾರಿಗಳು ಹಾರಂಗ್ ನದಿಗೆ ಬಿದ್ದಿವೆ. ಘಟನೆಯಲ್ಲಿ ಚಾಲಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಅಸ್ಸಾಂ| ₹45 ಕೋಟಿ ಮೌಲ್ಯದ ಮಾದಕ ವಸ್ತು ವಶ: ನಾಲ್ವರ ಬಂಧನ .<p>ಅಸ್ಸಾಂ ಹಾಗೂ ಮೇಘಾಲಯವನ್ನು ಸಂಪರ್ಕಿಸುವ ಸಿಲ್ಚರ್–ಕಲೈನ್ ರಸ್ತೆಯಲ್ಲಿರುವ ದಶಕಗಳ ಹಳೆಯ ಈ ಸೇತುವೆ ಸುಮಾರು ಎರಡು ವರ್ಷಗಳ ನವೀಕರಣ ಕೆಲಸಗಳ ಬಳಿಕ ಕಳೆದ ತಿಂಗಳಷ್ಟೇ ಸಂಚಾರಕ್ಕೆ ಮುಕ್ತವಾಗಿತ್ತು.</p><p>ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೃದುಲ್ ಯಾದವ್ ತಿಳಿಸಿದ್ದಾರೆ.</p>.ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿ 2.6 ಲಕ್ಷ ಜನ .<p>ಘಟನಾ ಸ್ಥಳದಲ್ಲಿ ಸಂಚಾರ ನಿರ್ಬಂಧಗಳಿದ್ದವು, ಓವರ್ಲೋಡ್ ವಾಹನಗಳ ತಪಾಸಣೆಗೆ ನಾಲ್ಕು ಚೆಕ್ಪಾಯಿಂಟ್ಗಳನ್ನು ನಿರ್ಮಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.</p><p>ಎರಡು ಟ್ರಕ್ಗಳ ಚಾಲಕರಿಗೆ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಪ ಏನಾಗಿದೆ ಎಂಬುದರ ಬಗ್ಗೆ ತನಿಖೆ ನಡೆಲಾಗುವುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನುಮಾಲ್ ಮಹಟ್ಟಾ ಹೇಳಿದ್ದಾರೆ.</p>.ಅಸ್ಸಾಂ | ಪ್ರವಾಹ ಪರಿಸ್ಥಿತಿ ಉಲ್ಬಣ: ಐದು ಲಕ್ಷಕ್ಕೂ ಅಧಿಕ ಮಂದಿಗೆ ತೊಂದರೆ.<p>‘ಸೇತುವೆ ಕುಸಿದಿದ್ದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನದಿ ದಾಟಲು ಅಲ್ಲಿ ದೋಣಿಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.</p><p>ಸೇತುವೆ ನವೀಕರಣದ ವೇಳೆ ಕಳಪೆ ಮಟ್ಟದ ವಸ್ತುಗಳನ್ನು ಉಪಯೋಗಿಸಿದ್ದೇ ಅವಘಢಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.</p><p>ಆದರೆ ಸ್ಥಳೀಯರ ಈ ಆರೋಪವನ್ನು ಜಿಲ್ಲಾ ಪರಿಷತ್ ಸದಸ್ಯ ಫರಿದಾ ಪರ್ವೀನ್ ಲಷ್ಕರ್ ತಳ್ಳಿ ಹಾಕಿದ್ದು, ಸೇತುವೆ ಭಾರ ಹೊರುವ ಸಾಮರ್ಥ್ಯ 40 ಟನ್. ಆದರೆ ಈ ಲಾರಿಗಳು ಸುಮಾರು 120–130 ಟನ್ ಭಾರ ಹೊತ್ತಿದ್ದವು ಎಂದು ಹೇಳಿದ್ದಾರೆ.</p> .ಅಸ್ಸಾಂ, ಅರುಣಾಚಲದಲ್ಲಿ ಮಳೆ ಆರ್ಭಟ | 14 ಮಂದಿ ಸಾವು: ಜನಜೀವನ ಅಸ್ತವ್ಯಸ್ತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಲ್ಚರ್:</strong> ಅಸ್ಸಾಂನ ಖಚ್ಚರ್ ಜಿಲ್ಲೆಯಲ್ಲಿ ನವೀಕರಣಗೊಂಡ ಸೇತುವೆಯೊಂದು ಕುಸಿದು ಓವರ್ಲೋಡ್ ಆಗಿದ್ದ ಎರಡು ಲಾರಿಗಳು ಹಾರಂಗ್ ನದಿಗೆ ಬಿದ್ದಿವೆ. ಘಟನೆಯಲ್ಲಿ ಚಾಲಕರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.ಅಸ್ಸಾಂ| ₹45 ಕೋಟಿ ಮೌಲ್ಯದ ಮಾದಕ ವಸ್ತು ವಶ: ನಾಲ್ವರ ಬಂಧನ .<p>ಅಸ್ಸಾಂ ಹಾಗೂ ಮೇಘಾಲಯವನ್ನು ಸಂಪರ್ಕಿಸುವ ಸಿಲ್ಚರ್–ಕಲೈನ್ ರಸ್ತೆಯಲ್ಲಿರುವ ದಶಕಗಳ ಹಳೆಯ ಈ ಸೇತುವೆ ಸುಮಾರು ಎರಡು ವರ್ಷಗಳ ನವೀಕರಣ ಕೆಲಸಗಳ ಬಳಿಕ ಕಳೆದ ತಿಂಗಳಷ್ಟೇ ಸಂಚಾರಕ್ಕೆ ಮುಕ್ತವಾಗಿತ್ತು.</p><p>ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೃದುಲ್ ಯಾದವ್ ತಿಳಿಸಿದ್ದಾರೆ.</p>.ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿ 2.6 ಲಕ್ಷ ಜನ .<p>ಘಟನಾ ಸ್ಥಳದಲ್ಲಿ ಸಂಚಾರ ನಿರ್ಬಂಧಗಳಿದ್ದವು, ಓವರ್ಲೋಡ್ ವಾಹನಗಳ ತಪಾಸಣೆಗೆ ನಾಲ್ಕು ಚೆಕ್ಪಾಯಿಂಟ್ಗಳನ್ನು ನಿರ್ಮಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.</p><p>ಎರಡು ಟ್ರಕ್ಗಳ ಚಾಲಕರಿಗೆ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಪ ಏನಾಗಿದೆ ಎಂಬುದರ ಬಗ್ಗೆ ತನಿಖೆ ನಡೆಲಾಗುವುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನುಮಾಲ್ ಮಹಟ್ಟಾ ಹೇಳಿದ್ದಾರೆ.</p>.ಅಸ್ಸಾಂ | ಪ್ರವಾಹ ಪರಿಸ್ಥಿತಿ ಉಲ್ಬಣ: ಐದು ಲಕ್ಷಕ್ಕೂ ಅಧಿಕ ಮಂದಿಗೆ ತೊಂದರೆ.<p>‘ಸೇತುವೆ ಕುಸಿದಿದ್ದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನದಿ ದಾಟಲು ಅಲ್ಲಿ ದೋಣಿಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.</p><p>ಸೇತುವೆ ನವೀಕರಣದ ವೇಳೆ ಕಳಪೆ ಮಟ್ಟದ ವಸ್ತುಗಳನ್ನು ಉಪಯೋಗಿಸಿದ್ದೇ ಅವಘಢಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.</p><p>ಆದರೆ ಸ್ಥಳೀಯರ ಈ ಆರೋಪವನ್ನು ಜಿಲ್ಲಾ ಪರಿಷತ್ ಸದಸ್ಯ ಫರಿದಾ ಪರ್ವೀನ್ ಲಷ್ಕರ್ ತಳ್ಳಿ ಹಾಕಿದ್ದು, ಸೇತುವೆ ಭಾರ ಹೊರುವ ಸಾಮರ್ಥ್ಯ 40 ಟನ್. ಆದರೆ ಈ ಲಾರಿಗಳು ಸುಮಾರು 120–130 ಟನ್ ಭಾರ ಹೊತ್ತಿದ್ದವು ಎಂದು ಹೇಳಿದ್ದಾರೆ.</p> .ಅಸ್ಸಾಂ, ಅರುಣಾಚಲದಲ್ಲಿ ಮಳೆ ಆರ್ಭಟ | 14 ಮಂದಿ ಸಾವು: ಜನಜೀವನ ಅಸ್ತವ್ಯಸ್ತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>