ನವದೆಹಲಿ: ವಿಧಾನಸಭಾ ಚುನಾವಣಾ ಫಲಿತಾಂಶವು ಆತ್ಮನಿರ್ಭರ ಭಾರತ ಮತ್ತು ಸಬ್ ಕಾ ಸಾಥ್– ಸಬ್ ಕಾ ವಿಕಾಸ್ಗೆ ಸಂದ ಜಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಇಂದಿನ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವ ಎಂದು ಬಣ್ಣಿಸಿದರು.
‘ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸಲು ಹಲವಾರು ಪ್ರಯತ್ನಗಳು ನಡೆದವು. ಆದರೆ, ನನಗೆ ನಾಲ್ಕು ಜಾತಿಗಳು ಮಾತ್ರ ಸರ್ವೋಚ್ಚ. ಅವುಗಳೆಂದರೆ, ಮಹಿಳಾ ಶಕ್ತಿ, ಯುವಕರು, ರೈತರು ಮತ್ತು ಬಡವರು ಎಂದು ನಾನು ಹೇಳುತ್ತಲೇ ಇದ್ದೇನೆ, ಈ ನಾಲ್ವರು ಸಬಲೀಕರಣಗೊಂಡರೆ ದೇಶವು ಬಲಗೊಳ್ಳುತ್ತದೆ’ ಎಂದರು.
ಈ ಸಮೀಕ್ಷೆಯ ಫಲಿತಾಂಶ ಕಾಂಗ್ರೆಸ್ ಮತ್ತು ‘ಘಮಂಡಿಯಾ’ ಮೈತ್ರಿಗೆ ಪಾಠವಾಗಿದೆ. ಬೆರಳೆಣಿಕೆಯಷ್ಟು ರಾಜವಂಶಗಳು ಫೋಟೊ ಅವಕಾಶಕ್ಕಾಗಿ ಒಗ್ಗೂಡುವುದರಿಂದ ದೇಶವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಐದು ರಾಜ್ಯಗಳಲ್ಲಿ ನಡೆದ ವಿಧಾನಸಬಾ ಚುನಾವಣೆಯಲ್ಲಿ ಮತ ಎಣಿಕೆ ನಡೆದ ನಾಲ್ಕರಲ್ಲಿ, ಬಿಜೆಪಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಗೆಲವಿನ ಕೇಕೆ ಹಾಕಿದೆ. ಕಾಂಗ್ರೆಸ್ ತೆಲಂಗಾಣದಲ್ಲಿ ಅದ್ಭುತ ಜಯ ಸಾಧಿಸಿದೆ.
ಮೂರು ರಾಜ್ಯಗಳಲ್ಲಿನ ಗೆಲುವನ್ನು ಉಲ್ಲೇಖಿಸಿದ ಪ್ರಧಾನಿ, ಈ ’ಹ್ಯಾಟ್ರಿಕ್ ವಿಜಯಗಳು’ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಹ್ಯಾಟ್ರಿಕ್ ಗೆಲುವನ್ನು ಖಚಿತಪಡಿಸಿದೆ ಎಂದರು.
VIDEO | "These poll results are a lesson for Congress and 'Ghamandiya' alliance. A handful of dynasts coming together for photo opportunity cannot win the country," says PM Modi while addressing party workers at BJP headquarters in Delhi after the party's victory in assembly… pic.twitter.com/w3J1Bjk7ic
— Press Trust of India (@PTI_News) December 3, 2023
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.