ಮುಂಬೈ: ಯಾರೇ ಬೇಡಿಕೆ ಸಲ್ಲಿಸಿದರೂ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಖಾತೆ ಸಚಿವ ರಾಮದಾಸ್ ಅಠವಲೆ ತಿಳಿಸಿದರು.
ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವಂತೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹನ್ಸ್ ಸೋಮವಾರ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜಾತ್ಯತೀತತೆಯೇ ದೇಶದಲ್ಲಿ ಏಕಾತೆಯನ್ನು ಉಳಿಸಿಕೊಳ್ಳಲು ನೆರವಾಗಿದೆ. ಜಾತ್ಯತೀತ ಶಬ್ದ ಸಂವಿಧಾನದಲ್ಲಿ ಎಂದೆಂದಿಗೂ ಇರಲಿದೆ’ ಎಂದರು.