ಈ ವಿಚಾರದಲ್ಲಿ ತೀರ್ಪು ನೀಡಲು ಸುಪ್ರೀಂ ವಿಳಂಬ ಮಾಡುತ್ತಿದೆ ಎಂದಿರುವ ಬಾಬಾ, ‘ಸುಪ್ರೀಂ ಕೋರ್ಟ್ನಿಂದ ಯಾವ ಭರವಸೆಯೂ ಕಾಣುತ್ತಿಲ್ಲ. ಇನ್ನು ಕೇವಲ ಒಂದು ಆಯ್ಕೆಯಷ್ಟೇ ಉಳಿದಿದೆ. ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಸಂಸತ್ ನಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು. ಅದು ಶಾಸನಬದ್ಧವಾಗಬೇಕು. ಸುಪ್ರೀಂ ಕೋರ್ಟ್ ಆದೇಶ ಅಥವಾ ಸಂಸತ್ ಸುಗ್ರೀವಾಜ್ಞೆ ಇಲ್ಲದೆ ನಿರ್ಮಾಣ ಕಾರ್ಯ ಆರಂಭಿಸಿದರೆ, ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.