<p><strong>ನವದೆಹಲಿ:</strong> ಜಾಮೀನು ವಿಷಯಗಳನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಂದಿನ ವಿಚಾರಣೆಯಲ್ಲಿ ನಿರ್ಧರಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿತು.</p>.<p>ಜೈನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿದ್ದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠವು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತು.</p>.<p>ದೆಹಲಿ ಹೈಕೋರ್ಟ್, ಜೈನ್ ಅವರ ಜಾಮೀನು ಅರ್ಜಿಯನ್ನು ಜುಲೈ 9ರಂದು ವಿಚಾರಣೆಗೆ ಪಟ್ಟಿ ಮಾಡಿದೆ. </p>.<p>ಜೈನ್ ಅವರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ‘ಆರೋಪಿಯ ಜಾಮೀನಿನ ಹಕ್ಕನ್ನು ಮಣಿಸಲು ತನಿಖಾ ಸಂಸ್ಥೆಯು ಅಪೂರ್ಣ ಜಾರ್ಜ್ಶೀಟ್ ಸಲ್ಲಿಸಬಹುದೇ ಎಂಬ ಗಂಭೀರ ಪ್ರಶ್ನೆ ಈ ಪ್ರಕರಣದಿಂದ ಉದ್ಭವಿಸಿದೆ’ ಎಂದು ಹೇಳಿದರು.</p>.<p>ಕಾನೂನಿಗೆ ಸಂಬಂಧಿಸಿದ ಇಂತಹದ್ದೇ ವಿಷಯವು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠದ ಪರಿಗಣನೆಯಲ್ಲಿದ್ದು, ಜೈನ್ ಅವರ ಜಾಮೀನು ಅರ್ಜಿಯನ್ನೂ ಅದರೊಂದಿಗೆ ಜೋಡಿಸುವಂತೆ ರಜಾಕಾಲದ ಪೀಠವನ್ನು ಸಿಂಘ್ವಿ ಕೋರಿದರು. </p>.<p>‘ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಕಾನೂನಿನ ಅಂಶವನ್ನು ಪರಿಗಣಿಸುತ್ತಿದೆ. ಹೀಗಿರುವಾಗ ದ್ವಿಸದಸ್ಯ ಪೀಠ ಅದನ್ನು ನಿಭಾಯಿಸುವುದು ಸೂಕ್ತವಲ್ಲ’ ಎಂದ ಪೀಠವು, ಜಾಮೀನಿನ ವಿಷಯವನ್ನು ಹೈಕೋರ್ಟ್ ಮೊದಲಿಗೆ ನಿರ್ಧರಿಸಲಿ. ಹೈಕೋರ್ಟ್ನ ತೀರ್ಪು ವ್ಯತಿರಿಕ್ತ ಆಗಿದ್ದರೆ ಅರ್ಜಿದಾರರು ಪ್ರಶ್ನಿಸಬಹುದು ಎಂದು ಹೇಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜಾಮೀನು ವಿಷಯಗಳನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಂದಿನ ವಿಚಾರಣೆಯಲ್ಲಿ ನಿರ್ಧರಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿತು.</p>.<p>ಜೈನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿದ್ದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠವು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತು.</p>.<p>ದೆಹಲಿ ಹೈಕೋರ್ಟ್, ಜೈನ್ ಅವರ ಜಾಮೀನು ಅರ್ಜಿಯನ್ನು ಜುಲೈ 9ರಂದು ವಿಚಾರಣೆಗೆ ಪಟ್ಟಿ ಮಾಡಿದೆ. </p>.<p>ಜೈನ್ ಅವರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ‘ಆರೋಪಿಯ ಜಾಮೀನಿನ ಹಕ್ಕನ್ನು ಮಣಿಸಲು ತನಿಖಾ ಸಂಸ್ಥೆಯು ಅಪೂರ್ಣ ಜಾರ್ಜ್ಶೀಟ್ ಸಲ್ಲಿಸಬಹುದೇ ಎಂಬ ಗಂಭೀರ ಪ್ರಶ್ನೆ ಈ ಪ್ರಕರಣದಿಂದ ಉದ್ಭವಿಸಿದೆ’ ಎಂದು ಹೇಳಿದರು.</p>.<p>ಕಾನೂನಿಗೆ ಸಂಬಂಧಿಸಿದ ಇಂತಹದ್ದೇ ವಿಷಯವು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠದ ಪರಿಗಣನೆಯಲ್ಲಿದ್ದು, ಜೈನ್ ಅವರ ಜಾಮೀನು ಅರ್ಜಿಯನ್ನೂ ಅದರೊಂದಿಗೆ ಜೋಡಿಸುವಂತೆ ರಜಾಕಾಲದ ಪೀಠವನ್ನು ಸಿಂಘ್ವಿ ಕೋರಿದರು. </p>.<p>‘ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಕಾನೂನಿನ ಅಂಶವನ್ನು ಪರಿಗಣಿಸುತ್ತಿದೆ. ಹೀಗಿರುವಾಗ ದ್ವಿಸದಸ್ಯ ಪೀಠ ಅದನ್ನು ನಿಭಾಯಿಸುವುದು ಸೂಕ್ತವಲ್ಲ’ ಎಂದ ಪೀಠವು, ಜಾಮೀನಿನ ವಿಷಯವನ್ನು ಹೈಕೋರ್ಟ್ ಮೊದಲಿಗೆ ನಿರ್ಧರಿಸಲಿ. ಹೈಕೋರ್ಟ್ನ ತೀರ್ಪು ವ್ಯತಿರಿಕ್ತ ಆಗಿದ್ದರೆ ಅರ್ಜಿದಾರರು ಪ್ರಶ್ನಿಸಬಹುದು ಎಂದು ಹೇಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>