ಬಾಂಗ್ಲಾದೇಶದ 25 ಕಳ್ಳಸಾಗಣೆದಾರರು ಚೆಕ್ಪೋಸ್ಟ್ಗೆ 200 ಮೀ. ದೂರದಲ್ಲಿ ಭಾರತದಿಂದ ಕರೆತಂದಿದ್ದ ಗೋವುಗಳೊಂದಿಗೆ ಬಂದಿದ್ದರು. ಚೆಕ್ಪೋಸ್ಟ್ ಸಮೀಪ ಬರುತ್ತಿದ್ದಂತೆ ನಾಡಬಾಂಬ್ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (ಬಿಜಿಬಿ) ಕಳ್ಳಸಾಗಣೆದಾರರನ್ನು ಹಿಡಿಯಲು ಪ್ರಯತ್ನಿಸಲಿಲ್ಲ ಎಂದು ಬಿಎಸ್ಎಫ್ ಆರೋಪಿಸಿದ್ದು, ಪಶ್ಚಿಮ ಬಂಗಾಳದ ದಕ್ಷಿಣದ ಗಡಿಯುದ್ದಕ್ಕೂ ಪ್ರತಿಭಟನೆ ದಾಖಲಿಸಿದೆ ಹಾಗೂ ಘಟನೆಯನ್ನು ಖಂಡಿಸಿದೆ.