<p><strong>ಕೋಲ್ಕತ್ತ</strong>: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೆಸರಾಂತ ತಬಲಾ ವಾದಕ ವಿಕ್ರಂ ಘೋಷ್ ಮತ್ತು ಹಿರಿಯ ನಟ ವಿಕ್ಟರ್ ಬ್ಯಾನರ್ಜಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.</p>.<p>ಘೋಷ್ ಅವರ ಇಲ್ಲಿನ ಸಾಲ್ಟ್ ಲೇಕ್ ನಿವಾಸಕ್ಕೆ ತೆರಳಿದ್ದ ಭಾಗವತ್ ಅವರು ಗೋಪ್ಯವಾಗಿ ಕೆಲಹೊತ್ತು ಮಾತುಕತೆ ನಡೆಸಿದರು.</p>.<p>‘ನನ್ನ ಹಾಗೂ ನನ್ನ ಗುರು ಪಂಡಿತ್ ಎಸ್.ಶೇಖರ್ ಜೀ (ಹೆಸರಾಂತ ಮೃದಂಗ ವಾದಕ), ಸಿತಾರ್ ವಾದಕ ಅಭಿಷೇಕ್ ಮಲ್ಲಿಕ್ ಅವರ ಕಲಾ ಪ್ರದರ್ಶನ ಆಲಿಸಿದರು. ಜೊತೆಗೆ ಊಟ ಮಾಡಿದರು’ ಎಂದು ಘೋಷ್ ಬಳಿಕ ತಿಳಿಸಿದರು.</p>.<p>ನಂತರ ಭಾಗವತ್ ಅವರು ನಟ ವಿಕ್ಟರ್ ಬ್ಯಾನರ್ಜಿ ಅವರ ನಿವಾಸಕ್ಕೂ ತೆರಳಿ ಚರ್ಚಿಸಿದರು. ಬ್ಯಾನರ್ಜಿ ಅವರು 1991ರ ಲೋಕಸಭೆ ಚುನಾವಣೆಯಲ್ಲಿ ಕೋಲ್ಕತ್ತದ ನಾರ್ಥ್ ವೆಸ್ಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪರಾಭವಗೊಂಡಿದ್ದರು.</p>.<p>ಭಾಗವತ್ ಅವರು, ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅವರನ್ನು ಶನಿವಾರ ಭೇಟಿಯಾಗಿದ್ದರು. ಚೌಬೆ ಅವರು 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣಾಂಗರ್ ಕ್ಷೇತ್ರದಿಂದ ಮಹುವಾ ಮೊಯಿತ್ರಾ ವಿರುದ್ಧ ಸ್ಪರ್ಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೆಸರಾಂತ ತಬಲಾ ವಾದಕ ವಿಕ್ರಂ ಘೋಷ್ ಮತ್ತು ಹಿರಿಯ ನಟ ವಿಕ್ಟರ್ ಬ್ಯಾನರ್ಜಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.</p>.<p>ಘೋಷ್ ಅವರ ಇಲ್ಲಿನ ಸಾಲ್ಟ್ ಲೇಕ್ ನಿವಾಸಕ್ಕೆ ತೆರಳಿದ್ದ ಭಾಗವತ್ ಅವರು ಗೋಪ್ಯವಾಗಿ ಕೆಲಹೊತ್ತು ಮಾತುಕತೆ ನಡೆಸಿದರು.</p>.<p>‘ನನ್ನ ಹಾಗೂ ನನ್ನ ಗುರು ಪಂಡಿತ್ ಎಸ್.ಶೇಖರ್ ಜೀ (ಹೆಸರಾಂತ ಮೃದಂಗ ವಾದಕ), ಸಿತಾರ್ ವಾದಕ ಅಭಿಷೇಕ್ ಮಲ್ಲಿಕ್ ಅವರ ಕಲಾ ಪ್ರದರ್ಶನ ಆಲಿಸಿದರು. ಜೊತೆಗೆ ಊಟ ಮಾಡಿದರು’ ಎಂದು ಘೋಷ್ ಬಳಿಕ ತಿಳಿಸಿದರು.</p>.<p>ನಂತರ ಭಾಗವತ್ ಅವರು ನಟ ವಿಕ್ಟರ್ ಬ್ಯಾನರ್ಜಿ ಅವರ ನಿವಾಸಕ್ಕೂ ತೆರಳಿ ಚರ್ಚಿಸಿದರು. ಬ್ಯಾನರ್ಜಿ ಅವರು 1991ರ ಲೋಕಸಭೆ ಚುನಾವಣೆಯಲ್ಲಿ ಕೋಲ್ಕತ್ತದ ನಾರ್ಥ್ ವೆಸ್ಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪರಾಭವಗೊಂಡಿದ್ದರು.</p>.<p>ಭಾಗವತ್ ಅವರು, ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅವರನ್ನು ಶನಿವಾರ ಭೇಟಿಯಾಗಿದ್ದರು. ಚೌಬೆ ಅವರು 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣಾಂಗರ್ ಕ್ಷೇತ್ರದಿಂದ ಮಹುವಾ ಮೊಯಿತ್ರಾ ವಿರುದ್ಧ ಸ್ಪರ್ಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>